<p><strong>ಹೈದರಾಬಾದ್: </strong>ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನೋಂದಣಿ (ಎನ್ಆರ್ಸಿ) ಜಾರಿಗೆ ಅವಕಾಶ ನೀಡುವುದಿಲ್ಲ ಎಂಬ ದೇಶದ ಹಲವು ರಾಜ್ಯಗಳ ಮುಖ್ಯಮಂತ್ರಿಗಳ ಹೇಳಿಕೆಗೆ ಸದ್ಯ ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ ರೆಡ್ಡಿ ಅವರೂ ಧ್ವನಿಗೂಡಿಸಿದ್ದಾರೆ.</p>.<p>ಯಾವುದೇ ಸಂದರ್ಭದಲ್ಲೂಆಂಧ್ರ ಪ್ರದೇಶ ಎನ್ಆರ್ಸಿಯನ್ನು ಬೆಂಬಲಿಸುವುದಿಲ್ಲ ಎಂದು ಜಗನ್ ಮೋಹನ ರೆಡ್ಡಿ ಅವರು ಸ್ಪಷ್ಟಪಡಿಸಿದ್ದಾರೆ.</p>.<p>‘ಎನ್ಆರ್ಸಿ ಬಗ್ಗೆ ನೀವು ಸ್ಪಷ್ಟ ನಿಲುವು ಹೊಂದಬೇಕು ಎಂದು ಹಲವು ಮುಸ್ಲಿಂ ಸೋದರರು ನನ್ನನ್ನು ಕೇಳಿಕೊಂಡಿದ್ದಾರೆ. ಹೀಗಾಗಿ ಈ ಬಗ್ಗೆ ನಾನು ಸ್ಪಷ್ಟನೆ ನೀಡುತ್ತಿದ್ದೇನೆ. ದೇಶದಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಎನ್ಆರ್ಸಿಗೆ ನಮ್ಮ ಸಹಮತವಿಲ್ಲ. ಅದನ್ನು ಬೆಂಬಲಿಸುವುದಿಲ್ಲ. ಯಾವುದೇ ಸಂದರ್ಭದಲ್ಲೂ ಎನ್ಆರ್ಸಿ ಜಾರಿಗೆ ಅವಕಾಶ ನೀಡುವುದಿಲ್ಲ,’ ಎಂದು ಅವರು ಹೇಳಿದ್ದಾರೆ.</p>.<p>ಕಡಪಾ ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಅವರು ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದ್ದಾರೆ.</p>.<p>‘ಆಂಧ್ರ ಸರ್ಕಾರದ ಉಪ ಮುಖ್ಯಮಂತ್ರಿ ಅಝ್ಮತ್ ಬಾಷಾ ಶೇಖ್ ಬೇಪರಿ ಅವರು ನನ್ನನ್ನು ಭೇಟಿ ಮಾಡಿ ಎನ್ಆರ್ಸಿಗೆ ನಮ್ಮ ಸರ್ಕಾರದ ಬೆಂಬಲವಿಲ್ಲ ಎಂದು ಘೋಷಿಸಬೇಕು ಎಂದು ಕೋರಿದ್ದಾರೆ,’ ಎಂದೂ ಅವರು ತಿಳಿಸಿದರು.</p>.<p>‘ಕೇಂದ್ರಕ್ಕೆ ನೀವು ನೀಡುತ್ತಿರುವ ಬೆಂಬಲದ ಬಗ್ಗೆ ಮರುಪರಿಶೀಲನೆ ಮಾಡಿ,’ ಎಂದು ಜಗನ್ ಮೋಹನ ರೆಡ್ಡಿ ಕುರಿತುಎಂಐಎಂ ಪಕ್ಷದ ವರಿಷ್ಠ ಅಸಾದುದ್ದೀನ್ ಓವೈಸಿ ಅವರೂ ಹೇಳಿಕೆ ನೀಡಿದ್ದರು.</p>.<p><strong>ಇನ್ನಷ್ಟು...</strong></p>.<p><strong><a href="https://www.prajavani.net/stories/national/citizenship-amendment-act-will-not-accepted-in-bihar-says-nitish-kumar-691923.html">ಬಿಹಾರದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಜಾರಿಗೆ ಸಮ್ಮತವಿಲ್ಲ: ನಿತೀಶ್ ಕುಮಾರ್</a></strong></p>.<p><strong><a href="https://www.prajavani.net/stories/national/nrc-caa-not-allowed-in-rajasthan-ashok-gehlot-692415.html">ರಾಜಸ್ಥಾನದಲ್ಲಿ ಎನ್ಆರ್ಸಿ, ಸಿಎಎ ಜಾರಿಗೆ ಅವಕಾಶವಿಲ್ಲ: ಅಶೋಕ್ ಗೆಹ್ಲೋಟ್</a></strong></p>.<p><strong><a href="https://www.prajavani.net/stories/national/no-nrc-caa-enforcement-in-maharashtra-sharad-pawar-692193.html">ಮಹಾರಾಷ್ಟ್ರದಲ್ಲಿ ಎನ್ಆರ್ಸಿ, ಸಿಎಎ ಜಾರಿ ಬೇಡ: ಶರದ್ ಪವಾರ್</a></strong></p>.<p><strong><a href="https://www.prajavani.net/stories/national/two-effective-ways-to-stop-the-implementation-of-caanrc-prashant-kishor-tweets-692405.html">ಪೌರತ್ವ ಕಾಯ್ದೆ, ಎನ್ಆರ್ಸಿ ತಡೆಯಬಲ್ಲ ಎರಡು ಮಾರ್ಗ ತಿಳಿಸಿದ ಪ್ರಶಾಂತ್ ಕಿಶೋರ್</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್: </strong>ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನೋಂದಣಿ (ಎನ್ಆರ್ಸಿ) ಜಾರಿಗೆ ಅವಕಾಶ ನೀಡುವುದಿಲ್ಲ ಎಂಬ ದೇಶದ ಹಲವು ರಾಜ್ಯಗಳ ಮುಖ್ಯಮಂತ್ರಿಗಳ ಹೇಳಿಕೆಗೆ ಸದ್ಯ ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ ರೆಡ್ಡಿ ಅವರೂ ಧ್ವನಿಗೂಡಿಸಿದ್ದಾರೆ.</p>.<p>ಯಾವುದೇ ಸಂದರ್ಭದಲ್ಲೂಆಂಧ್ರ ಪ್ರದೇಶ ಎನ್ಆರ್ಸಿಯನ್ನು ಬೆಂಬಲಿಸುವುದಿಲ್ಲ ಎಂದು ಜಗನ್ ಮೋಹನ ರೆಡ್ಡಿ ಅವರು ಸ್ಪಷ್ಟಪಡಿಸಿದ್ದಾರೆ.</p>.<p>‘ಎನ್ಆರ್ಸಿ ಬಗ್ಗೆ ನೀವು ಸ್ಪಷ್ಟ ನಿಲುವು ಹೊಂದಬೇಕು ಎಂದು ಹಲವು ಮುಸ್ಲಿಂ ಸೋದರರು ನನ್ನನ್ನು ಕೇಳಿಕೊಂಡಿದ್ದಾರೆ. ಹೀಗಾಗಿ ಈ ಬಗ್ಗೆ ನಾನು ಸ್ಪಷ್ಟನೆ ನೀಡುತ್ತಿದ್ದೇನೆ. ದೇಶದಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಎನ್ಆರ್ಸಿಗೆ ನಮ್ಮ ಸಹಮತವಿಲ್ಲ. ಅದನ್ನು ಬೆಂಬಲಿಸುವುದಿಲ್ಲ. ಯಾವುದೇ ಸಂದರ್ಭದಲ್ಲೂ ಎನ್ಆರ್ಸಿ ಜಾರಿಗೆ ಅವಕಾಶ ನೀಡುವುದಿಲ್ಲ,’ ಎಂದು ಅವರು ಹೇಳಿದ್ದಾರೆ.</p>.<p>ಕಡಪಾ ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಅವರು ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದ್ದಾರೆ.</p>.<p>‘ಆಂಧ್ರ ಸರ್ಕಾರದ ಉಪ ಮುಖ್ಯಮಂತ್ರಿ ಅಝ್ಮತ್ ಬಾಷಾ ಶೇಖ್ ಬೇಪರಿ ಅವರು ನನ್ನನ್ನು ಭೇಟಿ ಮಾಡಿ ಎನ್ಆರ್ಸಿಗೆ ನಮ್ಮ ಸರ್ಕಾರದ ಬೆಂಬಲವಿಲ್ಲ ಎಂದು ಘೋಷಿಸಬೇಕು ಎಂದು ಕೋರಿದ್ದಾರೆ,’ ಎಂದೂ ಅವರು ತಿಳಿಸಿದರು.</p>.<p>‘ಕೇಂದ್ರಕ್ಕೆ ನೀವು ನೀಡುತ್ತಿರುವ ಬೆಂಬಲದ ಬಗ್ಗೆ ಮರುಪರಿಶೀಲನೆ ಮಾಡಿ,’ ಎಂದು ಜಗನ್ ಮೋಹನ ರೆಡ್ಡಿ ಕುರಿತುಎಂಐಎಂ ಪಕ್ಷದ ವರಿಷ್ಠ ಅಸಾದುದ್ದೀನ್ ಓವೈಸಿ ಅವರೂ ಹೇಳಿಕೆ ನೀಡಿದ್ದರು.</p>.<p><strong>ಇನ್ನಷ್ಟು...</strong></p>.<p><strong><a href="https://www.prajavani.net/stories/national/citizenship-amendment-act-will-not-accepted-in-bihar-says-nitish-kumar-691923.html">ಬಿಹಾರದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಜಾರಿಗೆ ಸಮ್ಮತವಿಲ್ಲ: ನಿತೀಶ್ ಕುಮಾರ್</a></strong></p>.<p><strong><a href="https://www.prajavani.net/stories/national/nrc-caa-not-allowed-in-rajasthan-ashok-gehlot-692415.html">ರಾಜಸ್ಥಾನದಲ್ಲಿ ಎನ್ಆರ್ಸಿ, ಸಿಎಎ ಜಾರಿಗೆ ಅವಕಾಶವಿಲ್ಲ: ಅಶೋಕ್ ಗೆಹ್ಲೋಟ್</a></strong></p>.<p><strong><a href="https://www.prajavani.net/stories/national/no-nrc-caa-enforcement-in-maharashtra-sharad-pawar-692193.html">ಮಹಾರಾಷ್ಟ್ರದಲ್ಲಿ ಎನ್ಆರ್ಸಿ, ಸಿಎಎ ಜಾರಿ ಬೇಡ: ಶರದ್ ಪವಾರ್</a></strong></p>.<p><strong><a href="https://www.prajavani.net/stories/national/two-effective-ways-to-stop-the-implementation-of-caanrc-prashant-kishor-tweets-692405.html">ಪೌರತ್ವ ಕಾಯ್ದೆ, ಎನ್ಆರ್ಸಿ ತಡೆಯಬಲ್ಲ ಎರಡು ಮಾರ್ಗ ತಿಳಿಸಿದ ಪ್ರಶಾಂತ್ ಕಿಶೋರ್</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>