<p>ಹರಿದ್ವಾರ/ನವದೆಹಲಿ: ಯೋಗಗುರು ರಾಮದೇವ್ ಪತಂಜಲಿ ಆಯುರ್ವೇದದಿಂದ ಬಿಡುಗಡೆಯಾದ ಕೋರೋನಿಲ್ ಮಾರಾಟಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಆಯುಷ್ ಸಚಿವಾಲಯವು ಬುಧವಾರ ಸ್ಪಷ್ಟಪಡಿಸಿದೆ.</p>.<p>ಒಂದು ಉತ್ಪನ್ನವಾಗಿ ಅದನ್ನು ಮಾರಾಟ ಮಾಡಬಹುದು. ಆದರೆ, ಕೋವಿಡ್ ನಿರ್ಮೂಲನಾ ಔಷಧಿ ಎಂದು ಹೇಳಿಕೊಳ್ಳುವಂತಿಲ್ಲ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔಷಧಾಗಿ ಮಾರಾಟ ಮಾಡಬಹುದು ಎಂದು ಸಚಿವಾಲಯವು ತಿಳಿಸಿದೆ.</p>.<p>ಈ ಹಿಂದೆ ಕೊರೊನಿಲ್ ಕೋವಿಡ್ನಿಂದ ಗುಣಮುಖ ಮಾಡಲು ಬಿಡುಗಡೆಯಾದ ಔಷಧವೆಂದೇ ಬಾಬಾ ರಾಮ್ದೇವ್ ಹೇಳಿಕೊಂಡಿದ್ದರು. ಆದರೆ, ಈಗ ಕೋವಿಡ್ ರೋಗವನ್ನು ಸಮರ್ಪಕವಾಗಿ ನಿರ್ವಹಿಸುವ ಒಂದು ಉತ್ಪನ್ನ ಎಂದು ಹೇಳಿದ್ದಾರೆ.</p>.<p>ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಾಬಾ ರಾಮ್ದೇವ್, ’ಕೋವಿಡ್ ವಿರುದ್ಧ ಹೋರಾಡಲು ದೇಹಕ್ಕೆ ರೋಗನಿರೋಧಕ ಶಕ್ತಿಯನ್ನು ಈ ಕೊರೊನಿಲ್ ಔಷಧವು ಒದಗಿಸುತ್ತದೆ. ಈ ಬಗ್ಗೆ ಸಚಿವಾಲಯವು ಮೆಚ್ಚುಗೆಯ ನುಡಿಗಳನ್ನಾಡಿದೆ. ದೇಶದ ಎಲ್ಲ ಕಡೆಗಳಲ್ಲಿಯೂ ಈ ಔಷಧ ಲಭ್ಯವಿರಲಿದೆ’ ಎಂದು ಹೇಳಿದ್ದಾರೆ.</p>.<p>ಹಲವು ಹಂತದ ಅನುಮೋದನೆಯ ನಂತರ ಈ ಔಷಧ ಸೇವನೆಯಿಂದ ಏಳು ದಿನಗಳಲ್ಲಿ ಕೋವಿಡ್ ರೋಗಿ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಪತಂಜಲಿ ಹೇಳಿಕೊಂಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹರಿದ್ವಾರ/ನವದೆಹಲಿ: ಯೋಗಗುರು ರಾಮದೇವ್ ಪತಂಜಲಿ ಆಯುರ್ವೇದದಿಂದ ಬಿಡುಗಡೆಯಾದ ಕೋರೋನಿಲ್ ಮಾರಾಟಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಆಯುಷ್ ಸಚಿವಾಲಯವು ಬುಧವಾರ ಸ್ಪಷ್ಟಪಡಿಸಿದೆ.</p>.<p>ಒಂದು ಉತ್ಪನ್ನವಾಗಿ ಅದನ್ನು ಮಾರಾಟ ಮಾಡಬಹುದು. ಆದರೆ, ಕೋವಿಡ್ ನಿರ್ಮೂಲನಾ ಔಷಧಿ ಎಂದು ಹೇಳಿಕೊಳ್ಳುವಂತಿಲ್ಲ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔಷಧಾಗಿ ಮಾರಾಟ ಮಾಡಬಹುದು ಎಂದು ಸಚಿವಾಲಯವು ತಿಳಿಸಿದೆ.</p>.<p>ಈ ಹಿಂದೆ ಕೊರೊನಿಲ್ ಕೋವಿಡ್ನಿಂದ ಗುಣಮುಖ ಮಾಡಲು ಬಿಡುಗಡೆಯಾದ ಔಷಧವೆಂದೇ ಬಾಬಾ ರಾಮ್ದೇವ್ ಹೇಳಿಕೊಂಡಿದ್ದರು. ಆದರೆ, ಈಗ ಕೋವಿಡ್ ರೋಗವನ್ನು ಸಮರ್ಪಕವಾಗಿ ನಿರ್ವಹಿಸುವ ಒಂದು ಉತ್ಪನ್ನ ಎಂದು ಹೇಳಿದ್ದಾರೆ.</p>.<p>ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಾಬಾ ರಾಮ್ದೇವ್, ’ಕೋವಿಡ್ ವಿರುದ್ಧ ಹೋರಾಡಲು ದೇಹಕ್ಕೆ ರೋಗನಿರೋಧಕ ಶಕ್ತಿಯನ್ನು ಈ ಕೊರೊನಿಲ್ ಔಷಧವು ಒದಗಿಸುತ್ತದೆ. ಈ ಬಗ್ಗೆ ಸಚಿವಾಲಯವು ಮೆಚ್ಚುಗೆಯ ನುಡಿಗಳನ್ನಾಡಿದೆ. ದೇಶದ ಎಲ್ಲ ಕಡೆಗಳಲ್ಲಿಯೂ ಈ ಔಷಧ ಲಭ್ಯವಿರಲಿದೆ’ ಎಂದು ಹೇಳಿದ್ದಾರೆ.</p>.<p>ಹಲವು ಹಂತದ ಅನುಮೋದನೆಯ ನಂತರ ಈ ಔಷಧ ಸೇವನೆಯಿಂದ ಏಳು ದಿನಗಳಲ್ಲಿ ಕೋವಿಡ್ ರೋಗಿ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಪತಂಜಲಿ ಹೇಳಿಕೊಂಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>