ಶಾಂತರೀತಿಯಲ್ಲಿ ಮತದಾನ ನಡೆಯಲು ಕಾರಣವಾದ ಚುನಾವಣಾ ಆಯೋಗಕ್ಕೆ ಧನ್ಯವಾದ ಹೇಳಿದ ಮೋದಿ, ಈ ಕಾರಣದಿಂದಲೇ ದೀದಿ ಚುನಾವಣಾ ಆಯೋಗದ ಮೇಲೆ ಸಿಟ್ಟುಗೊಂಡಿದ್ದಾರೆ.ಮೂರು ಹಂತದ ಮತದಾನ ಮುಗಿದ ನಂತರ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರ ಸೂರ್ಯ ಮುಳುಗುತ್ತಿದ್ದಾನೆ ಎಂಬುದು ಸ್ಪಷ್ಟವಾಗಿದೆ. ದೀದಿ ಬಳಿ ಗೂಂಡಾಗಳ ಶಕ್ತಿ ಇದ್ದರೆ, ನಮ್ಮಲ್ಲಿ ಪ್ರಜಾಪ್ರಭುತ್ವದ ಸಾಮರ್ಥ್ಯ ಇದೆ ಎಂದು ಮೋದಿ ಹೇಳಿದ್ದಾರೆ.