<p><strong>ನವದೆಹಲಿ:</strong> ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ತಡೆಯುವ ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ಉದ್ದೇಶದಿಂದ 2013ರಲ್ಲಿ ಅಪರಾಧ ಕಾನೂನು ಕಾಯ್ದೆಗೆ ತಿದ್ದುಪಡಿ ತರಲಾಯಿತು. ನಿರ್ಭಯಾ ಪ್ರಕರಣದ ಕಾವು ಜೋರಾಗಿದ್ದ ಸಂದರ್ಭದಲ್ಲಿ ಜಾರಿಗೆ ಬಂದ ಈ ಕಾನೂನನ್ನು ‘ನಿರ್ಭಯಾ ಕಾಯ್ದೆ’ ಎಂದೇ ಕರೆಯಲಾಯಿತು. ಕಠಿಣ ಕಾನೂನು ಜಾರಿಗೆ ಬಂದ ನಂತರವೂ ಅತ್ಯಾಚಾರ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯೇ ಆಗಿದೆ.</p>.<p>*2018ನೇ ಸಾಲಿನ ‘ಭಾರತದಲ್ಲಿ ಅಪರಾಧ–2018’ ವರದಿ ಇನ್ನಷ್ಟೇ ಬಿಡುಗಡೆ ಆಗಬೇಕಿದೆ. ಹೀಗಾಗಿ 2018ರಲ್ಲಿ ದಾಖಲಾದ ಅತ್ಯಾಚಾರ ಪ್ರಕರಣಗಳ ದತ್ತಾಂಶ ಲಭ್ಯವಿಲ್ಲ</p>.<p><strong>ಲೋಕಸಭೆಯಲ್ಲೂ ಆರೋಪಿಗಳು</strong></p>.<p>ಲೋಕಸಭಾ ಸದಸ್ಯರಲ್ಲಿ ಅತ್ಯಾಚಾರದ ಆರೋಪಿಗಳೂ ಇದ್ದಾರೆ.</p>.<p>* 19 ಸದಸ್ಯರು ಮಹಿಳೆಯರ ವಿರುದ್ಧ ಎಸಗಿದ ಅಪರಾಧಗಳ ಆರೋಪ ಹೊತ್ತಿದ್ದಾರೆ. ಇವುಗಳಲ್ಲಿ ಅತ್ಯಾಚಾರ ಯತ್ನ, ಲೈಂಗಿಕ ದೌರ್ಜನ್ಯಗಳೂ ಇವೆ.</p>.<p>* 3 ಸದಸ್ಯರು ಅತ್ಯಾಚಾರದ ಆರೋಪ ಹೊತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿ, ವೈಎಸ್ಆರ್ಸಿಯ ಒಬ್ಬೊಬ್ಬರು ಅತ್ಯಾಚಾರದ ಆರೋಪಿಗಳಾಗಿದ್ದಾರೆ.</p>.<p><strong>ಉನ್ನಾವ್: 11 ತಿಂಗಳಲ್ಲಿ 96 ಅತ್ಯಾಚಾರ</strong></p>.<p>ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯಲ್ಲಿ 2019ರ ಮೊದಲ 11 ತಿಂಗಳಲ್ಲಿ 96 ಅತ್ಯಾಚಾರ ಪ್ರಕರಣ ದಾಖಲಾಗಿವೆ.</p>.<p>ಆದರೆ, ಇವುಗಳಲ್ಲಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಆರೋಪಿಯಾಗಿರುವ ಬಾಲಕಿ ಅತ್ಯಾಚಾರ ಪ್ರಕರಣ ಮತ್ತು ಶುಕ್ರವಾರ ಮೃತಪಟ್ಟ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಪ್ರಕರಣಗಳು ಮಾತ್ರ ಹೆಚ್ಚು ಸುದ್ದಿಯಾದವು. ಉಳಿದ 94 ಅತ್ಯಾಚಾರ ಪ್ರಕರಣಗಳ ಸ್ಥಿತಿಗತಿ ಬಗ್ಗೆ ಹೆಚ್ಚಿನ ವಿವರ ಲಭ್ಯವಿಲ್ಲ.</p>.<p>‘ಇಲ್ಲಿ ಅತ್ಯಾಚಾರದ ದೂರುಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸುವುದಿಲ್ಲ. ಈ ಪ್ರಕರಣಗಳ ಆರೋಪಿಗಳು ಆರ್ಥಿಕವಾಗಿ ಅಥವಾ ರಾಜಕೀಯವಾಗಿ ಪ್ರಬಲರಾಗಿರುತ್ತಾರೆ. ಉನ್ನಾವ್ ಜಿಲ್ಲೆಯ ರಾಜಕಾರಣಿಗಳ ಹುಕುಂ ಮೇರೆಗೆ ಪ್ರಕರಣಗಳು ದಾಖಲಾಗುತ್ತವೆ’ ಎಂದು ಇಲ್ಲಿನ ನಿವಾಸಿಯೊಬ್ಬರು ಹೇಳಿದ್ದಾರೆ. ಕುಲದೀಪ್ ಸಿಂಗ್ ಸೆಂಗರ್ ಆರೋಪಿಯಾಗಿರುವ ಪ್ರಕರಣ ಮತ್ತು ಶುಕ್ರವಾರ ಮೃತಪಟ್ಟ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಪ್ರಕರಣಗಳು, ಈ ಹೇಳಿಕೆಯನ್ನು ಪುಷ್ಟೀಕರಿಸುತ್ತವೆ.</p>.<p>ಸೆಂಗರ್ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದ ಬಾಲಕಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ನಿವಾಸದ ಎದುರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಆನಂತರವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡದ್ದು.</p>.<p>ಶುಕ್ರವಾರ ಮೃತಪಟ್ಟ ಸಂತ್ರಸ್ತೆಯ ದೂರನ್ನು ದಾಖಲಿಸಿಕೊಳ್ಳಲೂ ಪೊಲೀಸರು ನಿರಾಕರಿಸಿದ್ದರು. ನ್ಯಾಯಾಲಯದ ನಿರ್ದೇಶನದ ನಂತರ ಪ್ರಕರಣ ದಾಖಲಾಗಿತ್ತು.</p>.<p>* 3,400 – ಜಿಲ್ಲೆಯಲ್ಲಿ ಈ ವರ್ಷ ಈವರೆಗೆ ದಾಖಲಾಗಿರುವ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳು</p>.<p>* 31 ಲಕ್ಷ – ಜಿಲ್ಲೆಯ ಜನಸಂಖ್ಯೆ</p>.<p>* 907 – ಲಿಂಗಾನುಪಾತ</p>.<p>*66.37 % – ಸಾಕ್ಷರತೆ ಪ್ರಮಾಣ</p>.<p><strong>ಅತ್ಯಾಚಾರಕ್ಕೆ ಯತ್ನ</strong></p>.<p>ಉನ್ನಾವ್ ಜಿಲ್ಲೆಯ ಗ್ರಾಮವೊಂದರಲ್ಲಿ ಶುಕ್ರವಾರ ಸಂಜೆ 3 ವರ್ಷದ ಬಾಲಕಿ ಮೇಲೆ ಯುವಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.ಚೀರಾಟ ಕೇಳಿ ಅಕ್ಕಪಕ್ಕದ ಮನೆಯವರು ಧಾವಿಸಿ ಮಗುವನ್ನು ಕಾಪಾಡಿದ್ದಾರೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ತಡೆಯುವ ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ಉದ್ದೇಶದಿಂದ 2013ರಲ್ಲಿ ಅಪರಾಧ ಕಾನೂನು ಕಾಯ್ದೆಗೆ ತಿದ್ದುಪಡಿ ತರಲಾಯಿತು. ನಿರ್ಭಯಾ ಪ್ರಕರಣದ ಕಾವು ಜೋರಾಗಿದ್ದ ಸಂದರ್ಭದಲ್ಲಿ ಜಾರಿಗೆ ಬಂದ ಈ ಕಾನೂನನ್ನು ‘ನಿರ್ಭಯಾ ಕಾಯ್ದೆ’ ಎಂದೇ ಕರೆಯಲಾಯಿತು. ಕಠಿಣ ಕಾನೂನು ಜಾರಿಗೆ ಬಂದ ನಂತರವೂ ಅತ್ಯಾಚಾರ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯೇ ಆಗಿದೆ.</p>.<p>*2018ನೇ ಸಾಲಿನ ‘ಭಾರತದಲ್ಲಿ ಅಪರಾಧ–2018’ ವರದಿ ಇನ್ನಷ್ಟೇ ಬಿಡುಗಡೆ ಆಗಬೇಕಿದೆ. ಹೀಗಾಗಿ 2018ರಲ್ಲಿ ದಾಖಲಾದ ಅತ್ಯಾಚಾರ ಪ್ರಕರಣಗಳ ದತ್ತಾಂಶ ಲಭ್ಯವಿಲ್ಲ</p>.<p><strong>ಲೋಕಸಭೆಯಲ್ಲೂ ಆರೋಪಿಗಳು</strong></p>.<p>ಲೋಕಸಭಾ ಸದಸ್ಯರಲ್ಲಿ ಅತ್ಯಾಚಾರದ ಆರೋಪಿಗಳೂ ಇದ್ದಾರೆ.</p>.<p>* 19 ಸದಸ್ಯರು ಮಹಿಳೆಯರ ವಿರುದ್ಧ ಎಸಗಿದ ಅಪರಾಧಗಳ ಆರೋಪ ಹೊತ್ತಿದ್ದಾರೆ. ಇವುಗಳಲ್ಲಿ ಅತ್ಯಾಚಾರ ಯತ್ನ, ಲೈಂಗಿಕ ದೌರ್ಜನ್ಯಗಳೂ ಇವೆ.</p>.<p>* 3 ಸದಸ್ಯರು ಅತ್ಯಾಚಾರದ ಆರೋಪ ಹೊತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿ, ವೈಎಸ್ಆರ್ಸಿಯ ಒಬ್ಬೊಬ್ಬರು ಅತ್ಯಾಚಾರದ ಆರೋಪಿಗಳಾಗಿದ್ದಾರೆ.</p>.<p><strong>ಉನ್ನಾವ್: 11 ತಿಂಗಳಲ್ಲಿ 96 ಅತ್ಯಾಚಾರ</strong></p>.<p>ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯಲ್ಲಿ 2019ರ ಮೊದಲ 11 ತಿಂಗಳಲ್ಲಿ 96 ಅತ್ಯಾಚಾರ ಪ್ರಕರಣ ದಾಖಲಾಗಿವೆ.</p>.<p>ಆದರೆ, ಇವುಗಳಲ್ಲಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಆರೋಪಿಯಾಗಿರುವ ಬಾಲಕಿ ಅತ್ಯಾಚಾರ ಪ್ರಕರಣ ಮತ್ತು ಶುಕ್ರವಾರ ಮೃತಪಟ್ಟ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಪ್ರಕರಣಗಳು ಮಾತ್ರ ಹೆಚ್ಚು ಸುದ್ದಿಯಾದವು. ಉಳಿದ 94 ಅತ್ಯಾಚಾರ ಪ್ರಕರಣಗಳ ಸ್ಥಿತಿಗತಿ ಬಗ್ಗೆ ಹೆಚ್ಚಿನ ವಿವರ ಲಭ್ಯವಿಲ್ಲ.</p>.<p>‘ಇಲ್ಲಿ ಅತ್ಯಾಚಾರದ ದೂರುಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸುವುದಿಲ್ಲ. ಈ ಪ್ರಕರಣಗಳ ಆರೋಪಿಗಳು ಆರ್ಥಿಕವಾಗಿ ಅಥವಾ ರಾಜಕೀಯವಾಗಿ ಪ್ರಬಲರಾಗಿರುತ್ತಾರೆ. ಉನ್ನಾವ್ ಜಿಲ್ಲೆಯ ರಾಜಕಾರಣಿಗಳ ಹುಕುಂ ಮೇರೆಗೆ ಪ್ರಕರಣಗಳು ದಾಖಲಾಗುತ್ತವೆ’ ಎಂದು ಇಲ್ಲಿನ ನಿವಾಸಿಯೊಬ್ಬರು ಹೇಳಿದ್ದಾರೆ. ಕುಲದೀಪ್ ಸಿಂಗ್ ಸೆಂಗರ್ ಆರೋಪಿಯಾಗಿರುವ ಪ್ರಕರಣ ಮತ್ತು ಶುಕ್ರವಾರ ಮೃತಪಟ್ಟ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಪ್ರಕರಣಗಳು, ಈ ಹೇಳಿಕೆಯನ್ನು ಪುಷ್ಟೀಕರಿಸುತ್ತವೆ.</p>.<p>ಸೆಂಗರ್ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದ ಬಾಲಕಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ನಿವಾಸದ ಎದುರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಆನಂತರವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡದ್ದು.</p>.<p>ಶುಕ್ರವಾರ ಮೃತಪಟ್ಟ ಸಂತ್ರಸ್ತೆಯ ದೂರನ್ನು ದಾಖಲಿಸಿಕೊಳ್ಳಲೂ ಪೊಲೀಸರು ನಿರಾಕರಿಸಿದ್ದರು. ನ್ಯಾಯಾಲಯದ ನಿರ್ದೇಶನದ ನಂತರ ಪ್ರಕರಣ ದಾಖಲಾಗಿತ್ತು.</p>.<p>* 3,400 – ಜಿಲ್ಲೆಯಲ್ಲಿ ಈ ವರ್ಷ ಈವರೆಗೆ ದಾಖಲಾಗಿರುವ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳು</p>.<p>* 31 ಲಕ್ಷ – ಜಿಲ್ಲೆಯ ಜನಸಂಖ್ಯೆ</p>.<p>* 907 – ಲಿಂಗಾನುಪಾತ</p>.<p>*66.37 % – ಸಾಕ್ಷರತೆ ಪ್ರಮಾಣ</p>.<p><strong>ಅತ್ಯಾಚಾರಕ್ಕೆ ಯತ್ನ</strong></p>.<p>ಉನ್ನಾವ್ ಜಿಲ್ಲೆಯ ಗ್ರಾಮವೊಂದರಲ್ಲಿ ಶುಕ್ರವಾರ ಸಂಜೆ 3 ವರ್ಷದ ಬಾಲಕಿ ಮೇಲೆ ಯುವಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.ಚೀರಾಟ ಕೇಳಿ ಅಕ್ಕಪಕ್ಕದ ಮನೆಯವರು ಧಾವಿಸಿ ಮಗುವನ್ನು ಕಾಪಾಡಿದ್ದಾರೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>