ಸಾಕ್ಷ್ಯ ಸಂಗ್ರಹವಾಗಿಲ್ಲ: ‘ವಿಚಾರಣೆಗೆ 9 ತಿಂಗಳ ಕಾಲಾವಕಾಶ ನೀಡಿದರೂ, ಸಾಕ್ಷ್ಯಾಧಾರ ಸಂಗ್ರಹವಾಗಿಲ್ಲ ಎನ್ನುವುದು ಯಾದವ್ ಅವರು ಬರೆದ ಪತ್ರದಿಂದ ತಿಳಿದುಬಂದಿದೆ. ವಿಡಿಯೊ ಕಾನ್ಫರೆನ್ಸಿಂಗ್ ಸೌಲಭ್ಯ ಲಭ್ಯವಿದ್ದು, ಸಾಕ್ಷಿಗಳ ವಿಚಾರಣೆ ಮತ್ತು ದಾಖಲೆಗೆ ಇದನ್ನು ಯಾದವ್ ಅವರು ಉಪಯೋಗಿಸಿಕೊಳ್ಳಬೇಕು’ ಎಂದು ಪೀಠ ಸೂಚಿಸಿದೆ.