ಎರಡೂವರೆ ವರ್ಷದ ಅವಧಿಗೆ ಮುಖ್ಯಮಂತ್ರಿ ಹುದ್ದೆಯನ್ನು ಶಿವಸೇನಾಗೆ ಬಿಟ್ಟುಕೊಡುವುದಾಗಿ ಲಿಖಿತ ಭರವಸೆ ನೀಡುವುದಾದರೆ ಮಾತ್ರ ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ವಿಚಾರದಲ್ಲಿ ಮಧ್ಯೆ ಪ್ರವೇಶಿಸಲಿ. ನಿತಿನ್ ಗಡ್ಕರಿ ಅವರು ಮುಂಬೈ ನಿವಾಸಿ, ಇಲ್ಲಿಗೆ ಬರಲು ಅವರಿಗೆ ಅನುಮತಿ ಅಗತ್ಯವಿಲ್ಲ. ಲಿಖಿತ ಭರವಸೆಗೆ ಅವರು ಒಪ್ಪಿದರೆ ಈ ವಿಚಾರವನ್ನು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆಗೆ ತಿಳಿಸುತ್ತೇನೆ ಎಂದರು.