<p><strong>ನವದೆಹಲಿ:</strong>ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಕಡಿತಮಾಡಿರುವುದು ತಪ್ಪು ನಿರ್ಧಾರ. ಸರ್ಕಾರ ಈ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು ಎಂದು ಕಾಂಗ್ರೆಸ್ ನೇತಾರ ಪಿ.ಚಿದಂಬರಂ ಹೇಳಿದ್ದಾರೆ.</p>.<p>ಕಳೆದ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ. 4ರಿಂದ ಮೇಲಕ್ಕೇರಿಲ್ಲ. ಈ ಹೊತ್ತಲ್ಲಿ ಜಿಡಿಪಿಯತ್ತ ಗಮನ ಹರಿಸುವುದಕ್ಕಿಂತಜನರನ್ನು ಬದುಕಿಸುವ ಕಾರ್ಯದತ್ತ ಗಮನ ಹರಿಸಬೇಕು.</p>.<p>ಸರ್ಕಾರ ಮೂರ್ಖತನದ ಸಲಹೆಗಳನ್ನು ಕೆಲವೊಮ್ಮೆ ಪಾಲಿಸುತ್ತಿರುತ್ತದೆ. ಇದೆಂಥಾ ಮೂರ್ಖತನದ ಸಲಹೆ ಎಂದು ನನಗೆ ಅಚ್ಚರಿಯಾಗುತ್ತಿದೆ. ಪಿಪಿಎಫ್ ಮತ್ತು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಕಡಿಮೆ ಮಾಡುವುದು ತಾಂತ್ರಿಕವಾಗಿ ಸರಿ ಎನಿಸಿದರೂ ಈ ಹೊತ್ತಲ್ಲಿ ಅದನ್ನು ಮಾಡುತ್ತಿರುವುದು ಸರಿಯಲ್ಲ ಎಂದು ಚಿದಂಬರಂ ಟ್ವೀಟಿಸಿದ್ದಾರೆ.</p>.<p>ಸಂಕಷ್ಟದಲ್ಲಿರುವಾಗ ಮತ್ತು ಸಂಬಳ ಬಗ್ಗೆ ಅನಿಶ್ಚಿತತೆ ಇರುವಾಗ ಜನರು ಉಳಿತಾಯ ಯೋಜನೆಯ ಬಡ್ಡಿದರವನ್ನೇಅವಲಂಬಿಸಿರುತ್ತಾರೆ. ಹಾಗಾಗಿ ಸರ್ಕಾರ ತಮ್ಮ ನಿರ್ಧಾರದ ಬಗ್ಗೆ ಮರುಪರಿಶೀಲಿಸಿ ಜೂನ್ 30ರ ವರೆಗೆ ಹಳೇ ದರವನ್ನೇ ಮುಂದುವರಿಸಬೇಕು ಎಂದು ಅವರು ಹೇಳಿದ್ದಾರೆ.</p>.<p>ಮೂರು ತ್ರೈಮಾಸಿಕದ ಅಭಿವೃದ್ಧಿ ದರವು ಕ್ರಮವಾಗಿ ಶೇ5.6, ಶೇ5.1 ಮತ್ತು ಶೇ4.7 ಆಗಿದೆ. 2019-20ನೇ ವರ್ಷದ ನಾಲ್ಕನೇ ತ್ರೈಮಾಸಿಕವು ಮಂಗಳವಾರಕ್ಕೆಮಗಿದಿದೆ. ನಾಲ್ಕನೇ ತ್ರೈಮಾಸಿಕದ ಅಭಿವೃದ್ಧಿ ದರವು ಶೇ.4ಕ್ಕಿಂತ ಹೆಚ್ಚಿಲ್ಲ. ಹಾಗಾಗಿ 2019-20ನೇ ವರ್ಷದ ವಾರ್ಷಿಕ ಜಿಡಿಪಿ ಶೇ.4.8 ಆಗುವ ಮೂಲಕ ನಿರಾಸೆ ತಂದಿದೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong>ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಕಡಿತಮಾಡಿರುವುದು ತಪ್ಪು ನಿರ್ಧಾರ. ಸರ್ಕಾರ ಈ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು ಎಂದು ಕಾಂಗ್ರೆಸ್ ನೇತಾರ ಪಿ.ಚಿದಂಬರಂ ಹೇಳಿದ್ದಾರೆ.</p>.<p>ಕಳೆದ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ. 4ರಿಂದ ಮೇಲಕ್ಕೇರಿಲ್ಲ. ಈ ಹೊತ್ತಲ್ಲಿ ಜಿಡಿಪಿಯತ್ತ ಗಮನ ಹರಿಸುವುದಕ್ಕಿಂತಜನರನ್ನು ಬದುಕಿಸುವ ಕಾರ್ಯದತ್ತ ಗಮನ ಹರಿಸಬೇಕು.</p>.<p>ಸರ್ಕಾರ ಮೂರ್ಖತನದ ಸಲಹೆಗಳನ್ನು ಕೆಲವೊಮ್ಮೆ ಪಾಲಿಸುತ್ತಿರುತ್ತದೆ. ಇದೆಂಥಾ ಮೂರ್ಖತನದ ಸಲಹೆ ಎಂದು ನನಗೆ ಅಚ್ಚರಿಯಾಗುತ್ತಿದೆ. ಪಿಪಿಎಫ್ ಮತ್ತು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಕಡಿಮೆ ಮಾಡುವುದು ತಾಂತ್ರಿಕವಾಗಿ ಸರಿ ಎನಿಸಿದರೂ ಈ ಹೊತ್ತಲ್ಲಿ ಅದನ್ನು ಮಾಡುತ್ತಿರುವುದು ಸರಿಯಲ್ಲ ಎಂದು ಚಿದಂಬರಂ ಟ್ವೀಟಿಸಿದ್ದಾರೆ.</p>.<p>ಸಂಕಷ್ಟದಲ್ಲಿರುವಾಗ ಮತ್ತು ಸಂಬಳ ಬಗ್ಗೆ ಅನಿಶ್ಚಿತತೆ ಇರುವಾಗ ಜನರು ಉಳಿತಾಯ ಯೋಜನೆಯ ಬಡ್ಡಿದರವನ್ನೇಅವಲಂಬಿಸಿರುತ್ತಾರೆ. ಹಾಗಾಗಿ ಸರ್ಕಾರ ತಮ್ಮ ನಿರ್ಧಾರದ ಬಗ್ಗೆ ಮರುಪರಿಶೀಲಿಸಿ ಜೂನ್ 30ರ ವರೆಗೆ ಹಳೇ ದರವನ್ನೇ ಮುಂದುವರಿಸಬೇಕು ಎಂದು ಅವರು ಹೇಳಿದ್ದಾರೆ.</p>.<p>ಮೂರು ತ್ರೈಮಾಸಿಕದ ಅಭಿವೃದ್ಧಿ ದರವು ಕ್ರಮವಾಗಿ ಶೇ5.6, ಶೇ5.1 ಮತ್ತು ಶೇ4.7 ಆಗಿದೆ. 2019-20ನೇ ವರ್ಷದ ನಾಲ್ಕನೇ ತ್ರೈಮಾಸಿಕವು ಮಂಗಳವಾರಕ್ಕೆಮಗಿದಿದೆ. ನಾಲ್ಕನೇ ತ್ರೈಮಾಸಿಕದ ಅಭಿವೃದ್ಧಿ ದರವು ಶೇ.4ಕ್ಕಿಂತ ಹೆಚ್ಚಿಲ್ಲ. ಹಾಗಾಗಿ 2019-20ನೇ ವರ್ಷದ ವಾರ್ಷಿಕ ಜಿಡಿಪಿ ಶೇ.4.8 ಆಗುವ ಮೂಲಕ ನಿರಾಸೆ ತಂದಿದೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>