ಶ್ರೀನಗರ: ಪ್ರವಾಸಿಗರು ಹಾಗೂ ಅಮರನಾಥ ಯಾತ್ರಿಕರು ಕೂಡಲೇ ನಾಡಿನಿಂದ ಮರಳುವಂತೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಶುಕ್ರವಾರ ಸಂದೇಶ ರವಾನಿಸಿದೆ.
ಭಯೋತ್ಪಾದನಾ ದಾಳಿಯ ಮೂಲಕಅಮರನಾಥ ಯಾತ್ರೆಗೆಉಗ್ರರಿಂದ ಅಪಾಯವಿರುವ ಕುರಿತು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿರುವ ಬೆನ್ನಲೇ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳಿಗೆ ಮುಂದಾಗಿದೆ. ‘ಇಲ್ಲಿನ ಪ್ರವಾಸವನ್ನು ಮೊಟುಕುಗೊಳಿಸಿ ಹಾಗೂ ಕೂಡಲೇ ಹೊರಡಲು ಸೂಕ್ತ ಕ್ರಮವಹಿಸಿ’ ಎಂದು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಭದ್ರತೆಗೆ ಸಂಬಂಧಿಸಿದಂತೆ ಪ್ರಕಟಣೆ ಹೊರಡಿಸಿದ್ದಾರೆ.
(ಜಮ್ಮು–ಕಾಶ್ಮೀರ ಮಾಜಿ ಮುಖ್ಯಮಂತ್ರಿ ಓವರ್ ಅಬ್ದುಲ್ಲ ಪ್ರತಿಕ್ರಿಯೆ)
What I don’t get is that the government has spent money flying in teams of journalists, foreign & Indian, to brief them about how good the situation is, about how well the yatra has been going & then this order is issued ordering yatris & tourists to leave immediately! #Kashmir
ಅಮರನಾಥಯಾತ್ರೆ ಮಾರ್ಗದಲ್ಲಿ ಅಮೆರಿಕ ನಿರ್ಮಿತ ಸ್ನೈಪರ್(ಎಂ–24) ಸೇರಿದಂತೆ ಹಲವು ಸ್ಫೋಟಕಗಳನ್ನು ಸೇನೆ ವಶಪಡಿಸಿಕೊಂಡಿದೆ. ಭಯೋತ್ಪಾದನೆ ದಾಳಿ ನಡೆಸಲು ಪಾಕಿಸ್ತಾನ ಸೇನೆ ಉಗ್ರರಿಗೆ ನೆರವಾಗುತ್ತಿದೆ ಎಂದು ಭಾರತೀಯ ಸೇನೆ ಗಂಭೀರ ಆರೋಪ ಮಾಡಿದೆ.
ಜುಲೈ 1ರಿಂದ ಆರಂಭವಾದ ಅಮರನಾಥಯಾತ್ರೆ ಆಗಸ್ಟ್ 15ರ ವರೆಗೂ ಮುಂದುವರಿಯಬೇಕಿತ್ತು. ಆದರೆ, ಭದ್ರತಾ ಕಾರಣಗಳಿಂದಾಗಿ ಯಾತ್ರೆ ಮೊಟುಕುಗೊಳಿಸಲಾಗಿದೆ. ಕಾಶ್ಮೀರದಲ್ಲಿ ಹೆಚ್ಚುವರಿಯಾಗಿ ಭದ್ರತಾ ಪಡೆಗಳ ನಿಯೋಜನೆಯಾಗಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
Complete chaos on the streets of Srinagar. People rushing to ATMs, petrol pumps & stocking up on essential supplies. Is GOI only concerned about the safety of yatris while Kashmiris have been left to their own devices?