"ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂಬ ಸರ್ಕಾರದ ಪ್ರಸ್ತಾವ ಪೂರ್ವಾಗ್ರಹ ಪೀಡಿತವಾಗಿತ್ತು. ಅಪರಾಧಿಗಳ ಜೀವವನ್ನು ಸರ್ಕಾರಗಳು ರಾಜಕೀಯಕ್ಕೆ ಬಳಿಸಿಕೊಂಡಿವೆ. ಆದರೆ, ಅವರ ಜೀವನವನ್ನು ಬಳಸಿಕೊಳ್ಳಬೇಕು. ಅವರನ್ನು ಪಾಕಿಸ್ತಾನ ಅಥವಾ ಚೀನಾದ ಗಡಿಗೆ ರವಾನಿಸಿ. ಆದರೆ, ನೇಣಿಗೇರಿಸಬೇಡಿ. ಅವರನ್ನು ನೇಣಿಗೇರಿಸುವುದರಿಂದ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗುತ್ತವೆಯೇ? ಅವರನ್ನು ನೇಣಿಗೇರಿಸಿದರೂ, ಒಂದೆರಡು ವರ್ಷಗಳ ನಂತರ ಜನ ಮರೆತುಬಿಡುತ್ತಾರೆ. ಆದರೆ, ಅವರ ಕುಟುಂಬಗಳು ನರಳುತ್ತವೆ. ಅವರನ್ನು ಜೈಲಿನಲ್ಲೇ ಇರಲಾದರೂ ಬಿಡಿ. ಅವರನ್ನು ವೈದ್ಯಕೀಯ ಪ್ರಯೋಗಗಳಿಗಾದರೂ ಬಳಸಿಕೊಳ್ಳಿ. ಗಡಿ ಕಾಯಲು ಕಳುಹಿಸಿ. ಗಲ್ಲಿಗೇರಿಸಬೇಡಿ,’ ಎಂದು ಎಪಿ ಸಿಂಗ್ ಮಾಧ್ಯಮಗಳ ಮುಂದೆ ಹೇಳಿಕೊಂಡರು.