<p><strong>ಕೊಲ್ಕತ್ತಾ:</strong> ತರಕಾರಿ ಮಾರಾಟ ಮಳಿಗೆಗೆನುಗ್ಗಿದ ಕಳ್ಳರು ಹಣವನ್ನು ಅಲ್ಲಿಯೇ ಬಿಟ್ಟು, ಈರುಳ್ಳಿ ಹೊತ್ತೊಯ್ದ ಘಟನೆರಾಜ್ಯದ ಪೂರ್ವ ಮಿಡ್ನಾಪುರ್ ಜಿಲ್ಲೆಯ ಸುತಹತ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.</p>.<p>ಸುತಹತ ನಗರದ ತರಕಾರಿ ವ್ಯಾಪಾರಿ ಅಕ್ಷಯ್ ದಾಸ್ ಮಂಗಳವಾರ ಮುಂಜಾನೆಆಂಗಡಿ ಬಾಗಿಲು ತೆರೆದಾಗ ವಸ್ತುಗಳೆಲ್ಲಾ ಚಿಲ್ಲಾಪಿಲ್ಲಿಯಾಗಿದ್ದುದು ಕಂಡು ಗಾಬರಿಯಾದರು.</p>.<p>ಸೋಮವಾರ ರಾತ್ರಿ ಅಂಗಡಿಗೆ ನುಗ್ಗಿದ ಕಳ್ಳರು ಏನೆಲ್ಲಾ ಕದ್ದೊಯ್ದಿರಬಹುದು ಎಂದುಕೊಳ್ಳುತ್ತಾ ಮೊದಲು ಗಲ್ಲಾಪೆಟ್ಟಿಗೆ ನೋಡಿದರು. ಆದರೆ ಅಲ್ಲಿ ಹಣ ಹಾಗೆಯೇ ಇತ್ತು. ಆದರೆ ಒಂದಿಷ್ಟು ಈರುಳ್ಳಿ ಚೀಲಗಳು ನಾಪತ್ತೆಯಾಗಿದ್ದವು.</p>.<p>₹ 50 ಸಾವಿರ ಮೌಲ್ಯದ ಈರುಳ್ಳಿಯ ಜೊತೆಗೆಬೆಳ್ಳುಳ್ಳಿ ಮತ್ತು ಶುಂಠಿಯನ್ನೂ ಕಳ್ಳರು ಹೊತ್ತೊಯ್ದಿದ್ದಾರೆ. ಆದರೆ ಹಣದ ಪೆಟ್ಟಿಗೆಯಿಂದ ಒಂದೇ ಒಂದು ರೂಪಾಯಿಯನ್ನೂ ಕದ್ದಿಲ್ಲ.ಪಶ್ಚಿಮ ಬಂಗಾಳದಲ್ಲಿ ಪ್ರತಿ ಕೆ.ಜಿ. ಈರುಳ್ಳಿ ಬೆಲೆ ₹ 100 ದಾಟಿದೆ. ಕಳ್ಳರಿಗೂ ಈಗ ಹಣಕ್ಕಿಂತಲೂ ಈರುಳ್ಳಿಯೇ ಅಮೂಲ್ಯ ಎಂದುಅನ್ನಿಸುತ್ತಿರಬಹುದೆಂದು ಅಕ್ಷಯ್ ದಾಸ್ ನಕ್ಕು ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಲ್ಕತ್ತಾ:</strong> ತರಕಾರಿ ಮಾರಾಟ ಮಳಿಗೆಗೆನುಗ್ಗಿದ ಕಳ್ಳರು ಹಣವನ್ನು ಅಲ್ಲಿಯೇ ಬಿಟ್ಟು, ಈರುಳ್ಳಿ ಹೊತ್ತೊಯ್ದ ಘಟನೆರಾಜ್ಯದ ಪೂರ್ವ ಮಿಡ್ನಾಪುರ್ ಜಿಲ್ಲೆಯ ಸುತಹತ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.</p>.<p>ಸುತಹತ ನಗರದ ತರಕಾರಿ ವ್ಯಾಪಾರಿ ಅಕ್ಷಯ್ ದಾಸ್ ಮಂಗಳವಾರ ಮುಂಜಾನೆಆಂಗಡಿ ಬಾಗಿಲು ತೆರೆದಾಗ ವಸ್ತುಗಳೆಲ್ಲಾ ಚಿಲ್ಲಾಪಿಲ್ಲಿಯಾಗಿದ್ದುದು ಕಂಡು ಗಾಬರಿಯಾದರು.</p>.<p>ಸೋಮವಾರ ರಾತ್ರಿ ಅಂಗಡಿಗೆ ನುಗ್ಗಿದ ಕಳ್ಳರು ಏನೆಲ್ಲಾ ಕದ್ದೊಯ್ದಿರಬಹುದು ಎಂದುಕೊಳ್ಳುತ್ತಾ ಮೊದಲು ಗಲ್ಲಾಪೆಟ್ಟಿಗೆ ನೋಡಿದರು. ಆದರೆ ಅಲ್ಲಿ ಹಣ ಹಾಗೆಯೇ ಇತ್ತು. ಆದರೆ ಒಂದಿಷ್ಟು ಈರುಳ್ಳಿ ಚೀಲಗಳು ನಾಪತ್ತೆಯಾಗಿದ್ದವು.</p>.<p>₹ 50 ಸಾವಿರ ಮೌಲ್ಯದ ಈರುಳ್ಳಿಯ ಜೊತೆಗೆಬೆಳ್ಳುಳ್ಳಿ ಮತ್ತು ಶುಂಠಿಯನ್ನೂ ಕಳ್ಳರು ಹೊತ್ತೊಯ್ದಿದ್ದಾರೆ. ಆದರೆ ಹಣದ ಪೆಟ್ಟಿಗೆಯಿಂದ ಒಂದೇ ಒಂದು ರೂಪಾಯಿಯನ್ನೂ ಕದ್ದಿಲ್ಲ.ಪಶ್ಚಿಮ ಬಂಗಾಳದಲ್ಲಿ ಪ್ರತಿ ಕೆ.ಜಿ. ಈರುಳ್ಳಿ ಬೆಲೆ ₹ 100 ದಾಟಿದೆ. ಕಳ್ಳರಿಗೂ ಈಗ ಹಣಕ್ಕಿಂತಲೂ ಈರುಳ್ಳಿಯೇ ಅಮೂಲ್ಯ ಎಂದುಅನ್ನಿಸುತ್ತಿರಬಹುದೆಂದು ಅಕ್ಷಯ್ ದಾಸ್ ನಕ್ಕು ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>