₹ 50 ಸಾವಿರ ಮೌಲ್ಯದ ಈರುಳ್ಳಿಯ ಜೊತೆಗೆಬೆಳ್ಳುಳ್ಳಿ ಮತ್ತು ಶುಂಠಿಯನ್ನೂ ಕಳ್ಳರು ಹೊತ್ತೊಯ್ದಿದ್ದಾರೆ. ಆದರೆ ಹಣದ ಪೆಟ್ಟಿಗೆಯಿಂದ ಒಂದೇ ಒಂದು ರೂಪಾಯಿಯನ್ನೂ ಕದ್ದಿಲ್ಲ.ಪಶ್ಚಿಮ ಬಂಗಾಳದಲ್ಲಿ ಪ್ರತಿ ಕೆ.ಜಿ. ಈರುಳ್ಳಿ ಬೆಲೆ ₹ 100 ದಾಟಿದೆ. ಕಳ್ಳರಿಗೂ ಈಗ ಹಣಕ್ಕಿಂತಲೂ ಈರುಳ್ಳಿಯೇ ಅಮೂಲ್ಯ ಎಂದುಅನ್ನಿಸುತ್ತಿರಬಹುದೆಂದು ಅಕ್ಷಯ್ ದಾಸ್ ನಕ್ಕು ನುಡಿದರು.