<p><strong>ಚೆನ್ನೈ:</strong> ಲೋಕಸಭೆ ಚುನಾವಣೆ ಬಳಿಕ ಪ್ರಾದೇಶಿಕ ಪಕ್ಷಗಳನ್ನೆಲ್ಲ ಒಳಗೊಂಡಂತೆ ಹಾಗೂ ಕಾಂಗ್ರೆಸ್–ಬಿಜೆಪಿಯೇತರ <strong>ಸಂಯುಕ್ತ ರಂಗ</strong>ಸ್ಥಾಪನೆಯಾಗುವ ಯಾವ ಅವಕಾಶಗಳೂ ಇಲ್ಲ ಎಂದುಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರು ಹೇಳಿದ್ದಾರೆ.</p>.<p>ಈ ಕುರಿತು ತೆಲಂಗಾಣ ಮುಖ್ಯಮಂತ್ರಿ ಹಾಗೂ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ಎಸ್) ಮುಖ್ಯಸ್ಥ ಕೆ. ಚಂದ್ರಶೇಖರ ರಾವ್ ಅವರೊಂದಿಗೆ ಸಭೆ ನಡೆಸಿದ ಒಂದು ದಿನದ ಬಳಿಕ ಸ್ಟಾಲಿನ್ ಮಾತನಾಡಿದರು.</p>.<p>ತಮಿಳುನಾಡು ವಿಧಾನಸಭೆ ನಾಯಕರೂ ಆಗಿರುವ ಸ್ಟಾಲಿನ್, ರಾವ್ ಮೈತ್ರಿಕೂಟ ರಚಿಸುವ ಉದ್ದೇಶದಿಂದ ಇಲ್ಲಿಗೆ ಬಂದಿರಲಿಲ್ಲ ಎಂದೂ ಹೇಳಿದ್ದಾರೆ.</p>.<p>‘ಅವರು(ಕೆ.ಚಂದ್ರಶೇಖರ ರಾವ್) ಮೈತ್ರಿಕೂಟ ರಚಿಸುವ ಸಲುವಾಗಿ ಇಲ್ಲಿಗೆ ಬಂದಿರಲಿಲ್ಲ. ಅವರು ತಮಿಳುನಾಡಿಗೆ ಬಂದಿದ್ದು ದೇವಾಲಯಗಳಿಗೆ ಭೇಟಿನೀಡಲು ಬಂದಿದ್ದರು. ಅದರ ನಡುವೆ ನನ್ನೊಡನೆ ಮಾತನಾಡಲು ಸಮಯ ಕೇಳಿದ್ದರು ಅಷ್ಟೇ’ ಎಂದಿದ್ದಾರೆ.</p>.<p>ಕಾಂಗ್ರೆಸ್–ಬಿಜೆಪಿ ಇಲ್ಲದ ಸಂಯುಕ್ತ ರಂಗ ಅಸ್ತಿತ್ವಕ್ಕೆ ಬರಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಅಂತಹ ಅವಕಾಶಗಳು ನನಗೆ ಗೋಚರಿಸುತ್ತಿಲ್ಲ. ಆದಾಗ್ಯೂ ಆ ಕುರಿತು ನಾವು ಮೇ.23ರ ನಂತರ ತೀರ್ಮಾನಿಸಲಿದ್ದೇವೆ’ ಎಂದರು.</p>.<p>ಸ್ಟಾಲಿನ್ ಭೇಟಿಗೂ ಮುನ್ನ ರಾವ್ ಅವರು ಶ್ರೀರಂಗಂನಲ್ಲಿರುವ ಶ್ರೀ ರಂಗನಾಥ ದೇವಾಲಯಕ್ಕೆ ಭೇಟಿ ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> ಲೋಕಸಭೆ ಚುನಾವಣೆ ಬಳಿಕ ಪ್ರಾದೇಶಿಕ ಪಕ್ಷಗಳನ್ನೆಲ್ಲ ಒಳಗೊಂಡಂತೆ ಹಾಗೂ ಕಾಂಗ್ರೆಸ್–ಬಿಜೆಪಿಯೇತರ <strong>ಸಂಯುಕ್ತ ರಂಗ</strong>ಸ್ಥಾಪನೆಯಾಗುವ ಯಾವ ಅವಕಾಶಗಳೂ ಇಲ್ಲ ಎಂದುಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರು ಹೇಳಿದ್ದಾರೆ.</p>.<p>ಈ ಕುರಿತು ತೆಲಂಗಾಣ ಮುಖ್ಯಮಂತ್ರಿ ಹಾಗೂ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ಎಸ್) ಮುಖ್ಯಸ್ಥ ಕೆ. ಚಂದ್ರಶೇಖರ ರಾವ್ ಅವರೊಂದಿಗೆ ಸಭೆ ನಡೆಸಿದ ಒಂದು ದಿನದ ಬಳಿಕ ಸ್ಟಾಲಿನ್ ಮಾತನಾಡಿದರು.</p>.<p>ತಮಿಳುನಾಡು ವಿಧಾನಸಭೆ ನಾಯಕರೂ ಆಗಿರುವ ಸ್ಟಾಲಿನ್, ರಾವ್ ಮೈತ್ರಿಕೂಟ ರಚಿಸುವ ಉದ್ದೇಶದಿಂದ ಇಲ್ಲಿಗೆ ಬಂದಿರಲಿಲ್ಲ ಎಂದೂ ಹೇಳಿದ್ದಾರೆ.</p>.<p>‘ಅವರು(ಕೆ.ಚಂದ್ರಶೇಖರ ರಾವ್) ಮೈತ್ರಿಕೂಟ ರಚಿಸುವ ಸಲುವಾಗಿ ಇಲ್ಲಿಗೆ ಬಂದಿರಲಿಲ್ಲ. ಅವರು ತಮಿಳುನಾಡಿಗೆ ಬಂದಿದ್ದು ದೇವಾಲಯಗಳಿಗೆ ಭೇಟಿನೀಡಲು ಬಂದಿದ್ದರು. ಅದರ ನಡುವೆ ನನ್ನೊಡನೆ ಮಾತನಾಡಲು ಸಮಯ ಕೇಳಿದ್ದರು ಅಷ್ಟೇ’ ಎಂದಿದ್ದಾರೆ.</p>.<p>ಕಾಂಗ್ರೆಸ್–ಬಿಜೆಪಿ ಇಲ್ಲದ ಸಂಯುಕ್ತ ರಂಗ ಅಸ್ತಿತ್ವಕ್ಕೆ ಬರಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಅಂತಹ ಅವಕಾಶಗಳು ನನಗೆ ಗೋಚರಿಸುತ್ತಿಲ್ಲ. ಆದಾಗ್ಯೂ ಆ ಕುರಿತು ನಾವು ಮೇ.23ರ ನಂತರ ತೀರ್ಮಾನಿಸಲಿದ್ದೇವೆ’ ಎಂದರು.</p>.<p>ಸ್ಟಾಲಿನ್ ಭೇಟಿಗೂ ಮುನ್ನ ರಾವ್ ಅವರು ಶ್ರೀರಂಗಂನಲ್ಲಿರುವ ಶ್ರೀ ರಂಗನಾಥ ದೇವಾಲಯಕ್ಕೆ ಭೇಟಿ ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>