ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲಿನಲ್ಲಿ ಪತ್ನಿಗಾಗಿ ಸೀಟು ಕೇಳಿದ ವ್ಯಕ್ತಿಯ ಕೊಲೆ

Last Updated 14 ಫೆಬ್ರುವರಿ 2020, 11:51 IST
ಅಕ್ಷರ ಗಾತ್ರ

ಪುಣೆ: ರೈಲಿನಲ್ಲಿ ಪತ್ನಿಗೆಕುಳಿತುಕೊಳ್ಳಲುಸೀಟುಕೇಳಿದ ವ್ಯಕ್ತಿಯೊಬ್ಬರನ್ನು ಸಹ ಪ್ರಯಾಣಿಕರುಹೊಡೆದು ಸಾಯಿಸಿದ ಘಟನೆಮುಂಬೈ–ಲಾತೂರ್–ಬೀದರ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ನಡೆದಿದೆ.

ಮೃತರನ್ನು ಮುಂಬೈ ನಿವಾಸಿಸಾಗರ್ಮಾರ್ಕಂಡೆಎಂದುಗುರುತಿಸಲಾಗಿದ್ದು ಸಾಗರ್‌ ತನ್ನ ಪತ್ನಿ ಜ್ಯೋತಿಮತ್ತು 2 ವರ್ಷದ ಮಗಳೊಂದಿಗೆಸೋಲಾಪುರಕ್ಕೆತೆರಳಲು ಬುಧವಾರ ರಾತ್ರಿರೈಲುಹತ್ತಿದ್ದರು.

ಸಾಮಾನ್ಯ (ಜನರಲ್) ಭೋಗಿಯ ಸೀಟ್‌ಗಳುತುಂಬಿದ್ದವು, ತನ್ನ ಪತ್ನಿ ಮತ್ತು ಮಗಳಿಗೆ ಕುಳಿತುಕೊಳ್ಳಲು ಸ್ಥಳಾವಕಾಶ ನೀಡುವಂತೆಸಾಗರ್ಮಾರ್ಕಂಡೆ ಸಹ ಪ್ರಯಾಣಿಕರಲ್ಲಿಕೇಳಿಕೊಂಡಿದ್ದರು.

ಈ ಸಂಬಂಧ ಸಹ ಪ್ರಯಾಣಿಕರ ಜತೆಯಲ್ಲಿಮಾತಿನಚಕಮಕಿ ನಡೆದಿದ್ದು12 ಜನರ ಗುಂಪು ಅವರ ಮೇಲೆ ಹಲ್ಲೆ ನಡೆಸಿದೆ. ಈ ವೇಳೆಪತ್ನಿಯುದಾಳಿಕೋರರಲ್ಲಿ ತನ್ನ ಪತಿಯನ್ನು ಬಿಡುವಂತೆವಿನಂತಿಸಿಕೊಂಡರೂಯಾವುದೇ ಪ್ರಯೋಜನವಾಗಲಿಲ್ಲ. ಮುಂದಿನ ನಿಲ್ದಾಣಬರುವವರೆಗೂ ಅವರ ಮೇಲೆ ಹಲ್ಲೆ ನಡೆಸಲಾಗಿದೆ.

ರೈಲ್ವೆಪೊಲೀಸರುಅವರನ್ನು ಆಸ್ಪತ್ರೆಗೆ ಕರೆದುಕೊಂಡುಹೋದರೂಚಿಕಿತ್ಸೆಫಲಕಾರಿಯಾಗದೆ ಸಾಗರ್ಮಾರ್ಕಂಡೆಮೃತಪಟ್ಟಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಹಿಳೆಯರು, 4 ಪುರುಷರನ್ನು ಬಂಧಿಸಲಾಗಿದ್ದು ಉಳಿದ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದುಪೊಲೀಸರುಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT