ಪುಣೆ: ರೈಲಿನಲ್ಲಿ ಪತ್ನಿಗೆಕುಳಿತುಕೊಳ್ಳಲುಸೀಟುಕೇಳಿದ ವ್ಯಕ್ತಿಯೊಬ್ಬರನ್ನು ಸಹ ಪ್ರಯಾಣಿಕರುಹೊಡೆದು ಸಾಯಿಸಿದ ಘಟನೆಮುಂಬೈ–ಲಾತೂರ್–ಬೀದರ್ ಎಕ್ಸ್ಪ್ರೆಸ್ ರೈಲಿನಲ್ಲಿ ನಡೆದಿದೆ.
ಮೃತರನ್ನು ಮುಂಬೈ ನಿವಾಸಿಸಾಗರ್ಮಾರ್ಕಂಡೆಎಂದುಗುರುತಿಸಲಾಗಿದ್ದು ಸಾಗರ್ ತನ್ನ ಪತ್ನಿ ಜ್ಯೋತಿಮತ್ತು 2 ವರ್ಷದ ಮಗಳೊಂದಿಗೆಸೋಲಾಪುರಕ್ಕೆತೆರಳಲು ಬುಧವಾರ ರಾತ್ರಿರೈಲುಹತ್ತಿದ್ದರು.
ಸಾಮಾನ್ಯ (ಜನರಲ್) ಭೋಗಿಯ ಸೀಟ್ಗಳುತುಂಬಿದ್ದವು, ತನ್ನ ಪತ್ನಿ ಮತ್ತು ಮಗಳಿಗೆ ಕುಳಿತುಕೊಳ್ಳಲು ಸ್ಥಳಾವಕಾಶ ನೀಡುವಂತೆಸಾಗರ್ಮಾರ್ಕಂಡೆ ಸಹ ಪ್ರಯಾಣಿಕರಲ್ಲಿಕೇಳಿಕೊಂಡಿದ್ದರು.
ಈ ಸಂಬಂಧ ಸಹ ಪ್ರಯಾಣಿಕರ ಜತೆಯಲ್ಲಿಮಾತಿನಚಕಮಕಿ ನಡೆದಿದ್ದು12 ಜನರ ಗುಂಪು ಅವರ ಮೇಲೆ ಹಲ್ಲೆ ನಡೆಸಿದೆ. ಈ ವೇಳೆಪತ್ನಿಯುದಾಳಿಕೋರರಲ್ಲಿ ತನ್ನ ಪತಿಯನ್ನು ಬಿಡುವಂತೆವಿನಂತಿಸಿಕೊಂಡರೂಯಾವುದೇ ಪ್ರಯೋಜನವಾಗಲಿಲ್ಲ. ಮುಂದಿನ ನಿಲ್ದಾಣಬರುವವರೆಗೂ ಅವರ ಮೇಲೆ ಹಲ್ಲೆ ನಡೆಸಲಾಗಿದೆ.
ರೈಲ್ವೆಪೊಲೀಸರುಅವರನ್ನು ಆಸ್ಪತ್ರೆಗೆ ಕರೆದುಕೊಂಡುಹೋದರೂಚಿಕಿತ್ಸೆಫಲಕಾರಿಯಾಗದೆ ಸಾಗರ್ಮಾರ್ಕಂಡೆಮೃತಪಟ್ಟಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಹಿಳೆಯರು, 4 ಪುರುಷರನ್ನು ಬಂಧಿಸಲಾಗಿದ್ದು ಉಳಿದ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದುಪೊಲೀಸರುಹೇಳಿದ್ದಾರೆ.