ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೆಯಾಗಿರುವ ವಿಡಿಯೊದಲ್ಲಿ ಡಿಎಂಕೆ ನಾಯಕ ಭಾರತಿ, ಚುನಾವಣೆ ತಂತ್ರ ರೂಪಿಸಲು ಈ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕೂಡ ಜೆಡಿಯು ಉಚ್ಛಾಟಿತ ನಾಯಕ ಮತ್ತು ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ ಅವರಿಂದ ಸಹಾಯ ಪಡೆದಿದ್ದರು. ಆಗ ಈ ವಿಚಾರವನ್ನು ಮಾಧ್ಯಮಗಳು ಏಕೆ ಚರ್ಚೆಗೆ ತೆಗೆದುಕೊಳ್ಳಲಿಲ್ಲ. ಆದರೆ, ಇದೇ ಪ್ರಶಾಂತ್ ಕಿಶೋರ್ ಅವರನ್ನು ಡಿಎಂಕೆ ಚುನಾವಣಾ ತಂತ್ರ ರೂಪಿಸಲು ಬಳಸುವಾಗ ಮಾತ್ರ ಮಾಧ್ಯಮಗಳು ಈ ಕುರಿತು ಚರ್ಚೆ ನಡೆಸುತ್ತವೆ ಏಕೆ ಎಂದು ಪ್ರಶ್ನಿಸಿದ್ದಾರೆ.