ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನೋಂದಣಿಯನ್ನು ತಡೆಯಲು ಇರುವ ಸಮರ್ಥ ಮಾರ್ಗ ಎರಡೇ. 1) ನಿಮಗೆ ಸಿಗುವ ಎಲ್ಲ ವೇದಿಕೆಗಳಲ್ಲೂ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಾ, ಕಾಯ್ದೆ ವಿರುದ್ಧ ಧ್ವನಿ ಎತ್ತುವುದು. 2) ಬಿಜೆಪಿಯೇತರ ಸರ್ಕಾರಗಳಿರುವ 16 ರಾಜ್ಯಗಳ ಎಲ್ಲ ಮುಖ್ಯಮಂತ್ರಿಗಳು ಅಲ್ಲದಿದ್ದರೂ, ಬಹುತೇಕರು ಈ ಕಾಯ್ದೆ ಜಾರಿಯನ್ನು ನಿರಾಕರಿಸಬೇಕು. ಎಲ್ಲರೂ ಒಟ್ಟಾಗಿದ್ದಾರೆ ಎಂಬುದು ಇಲ್ಲಿ ಮುಖ್ಯ’ ಎಂದು ಅವರು ಟ್ವೀಟ್ ಮಾಡಿದ್ದಾರೆ.