ನವದೆಹಲಿ: ಡೆಲಿವರಿ ಬಾಯ್ ಹಿಂದೂ ಅಲ್ಲದ ಕಾರಣ ಗ್ರಾಹಕರೊಬ್ಬರು ಜೊಮ್ಯಾಟೊ ಆರ್ಡರ್ ರದ್ದು ಮಾಡಿದ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ರಾಮದಾಸ್ ಅಠವಳೆ, ಇದು ದೇಶದ ಒಗ್ಗಟ್ಟಿಗೆ ಭೀತಿ ಹುಟ್ಟಿಸುತ್ತದೆ.ಈ ರೀತಿಯ ಘಟನೆ ಸಮಾಜದಲ್ಲಿ ಒಡಕು ಸೃಷ್ಟಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಅದೇ ವೇಳೆ ಪ್ರಕರಣ ಬಗ್ಗೆ ತನಿಖೆ ನಡೆಸಬೇಕೆಂದು ಸಚಿವರು ಒತ್ತಾಯಿಸಿದ್ದಾರೆ.