‘ನಾನು ಮತ್ತೆ ಬರುತ್ತೇನೆ ಎಂದಿದ್ದೆ. ಆದರೆ, ನಿಮಗೆ ವೇಳಾಪಟ್ಟಿ ಕೊಡುವುದನ್ನು ಮರೆತಿದ್ದೆ. ನಾನು ನಿಮಗೆ ಒಂದು ವಿಚಾರದ ಬಗ್ಗೆ ಭರವಸೆ ನೀಡಬಹುದು. ನೀವು ಕೆಲ ಸಮಯದವರೆಗೆ ಕಾಯಬೇಕಾಗುತ್ತದೆ. ಕಳೆದ ಐದು ವರ್ಷದ ಅವಧಿಯಲ್ಲಿ ನಾನು ಹಲವು ಯೋಜನೆಗಳನ್ನು ಘೋಷಿಸಿದ್ದೆ. ಅವುಗಳ ಮೇಲೆ ಕೆಲಸ ಮಾಡಲು ಆರಂಭಿಸಿದ್ದೆ. ಅವುಗಳ ಉದ್ಘಾಟನೆಗೆ ನಾನೇ ಬಂದರೂ ಬರಬಹುದು,’ ಎಂದು ಹೇಳಿದ್ದಾರೆ. ಆ ಮೂಲಕ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ತಾವು ಪ್ರಯತ್ನ ಮಾಡುತ್ತಿರುವುದಾಗಿ ಸೂಚನೆ ನೀಡಿದ್ದಾರೆ.