‘ಗೈರಸೈಣ್ ಅನ್ನು ಬೇಸಿಗೆ ಕಾಲದ ರಾಜಧಾನಿಯನ್ನಾಗಿ ಘೋಷಿಸಿ, ಅಧಿಸೂಚನೆ ಹೊರಡಿಸಿರುವುದಕ್ಕೆ ಮುಖ್ಯಮಂತ್ರಿ ಅವರನ್ನು ಅಭಿನಂದಿಸುವೆ. ಗೈರಸೈಣ್ ಬೇಸಿಗೆ ಕಾಲದ ಹಾಗೂ ಡೆಹ್ರಾಡೂನ್ ತಾತ್ಕಾಲಿಕ ರಾಜಧಾನಿ ಎನ್ನುವುದಾದರೆ, ರಾಜ್ಯದ ಕಾಯಂ ರಾಜಧಾನಿ ಯಾವುದು ಎಂದು ಮುಖ್ಯಮಂತ್ರಿಗಳನ್ನು ಕೇಳಬಯಸುತ್ತೇನೆ’ ಎಂದು ಮಾಜಿ ಮುಖ್ಯಮಂತ್ರಿಯೂ ಆಗಿರುವ ಹರೀಶ್ ರಾವತ್ ಅವರು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.