ದೆಹಲಿಯಲ್ಲಿ ನಡೆಯುತ್ತಿರುವ ಜಾಗತಿಕ ಹವಾಮಾನ ಬದಲಾವಣೆ ಬಿಕ್ಕಟ್ಟಿನ ಕುರಿತ ಸಭೆಯಲ್ಲಿ ಮಾತನಾಡಿರುವ ಅವರು, ಮಾನವ ಶ್ರೇಯೋಭಿವೃದ್ಧಿಯು ಪರಿಸರದೊಂದಿಗೆ ಬೆಸೆದುಕೊಂಡಿದೆ. ಆದ್ದರಿಂದ ಈ ಜಗತ್ತು ಹವಾಮಾನ ಬದಲಾವಣೆ ವಿರುದ್ಧ ಹೋರಾಡಬೇಕಾಗಿದೆ ಎಂದು ಮೋದಿ ಅಭಿಪ್ರಾಯಪಟ್ಟರು.
PM Modi at the COP14 to UNCCD in Greater Noida,UP: My government has announced that India will put an end to single use plastic in the coming years. I believe the time has come for even the world to say good-bye to single use plastic. pic.twitter.com/0s1mN9WghS
‘ಭಾರತದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ವ್ಯಾಪಕವಾಗಿ ನಿರ್ಬಂಧಿಸಲಾಗುವುದು. ಉತ್ಪಾದನೆ, ಬಳಕೆ, ಆಮದಿನ ಮೇಲೂ ನಿಷೇಧ ಹೇರಲಾಗುವುದು ಎಂದು ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ,’ ಎಂದುಇತ್ತೀಚೆಗಷ್ಟೇ ಸುದ್ದಿ ಸಂಸ್ಥೆ ರಾಯ್ಟರ್ಸ್ ವರದಿ ಮಾಡಿತ್ತು.
ಅಕ್ಟೋಬರ್–2 ಮಹಾತ್ಮಾ ಗಾಂಧಿ ಜಯಂತಿ. ಅಂದು ಭಾರತವು ಆರು ಬಗೆಯ ಪ್ಲಾಸ್ಟಿಕ್ಗಳ ಬಳಕೆಯನ್ನು ನಿಷೇಧಿಸುತ್ತಿದೆ. ಪ್ಲಾಸ್ಟಿಕ್ ಚೀಲಗಳು, ಕಪ್ಗಳು, ತಟ್ಟೆಗಳು, ಬಾಟಲಿಗಳು, ಸ್ಟ್ರಾಗಳು ಈ ಪಟ್ಟಿಯಲ್ಲಿವೆ.
ದಿನದಿಂದ ದಿನಕ್ಕೆ ಬೃಹತ್ ಸಮಸ್ಯಯಾಗಿ ಕಾಡುತ್ತಿರುವ ಪ್ಲಾಸ್ಟಿಕ್ ಬಗ್ಗೆ ಜಗತ್ತು ಆತಂಕಕ್ಕೀಡಾಗಿದೆ. ಅದರಲ್ಲೂ ಸಾಗರದ ಒಡಲಲ್ಲಿ ಶೇ. 50ರಷ್ಟು ಮರುಬಳಕೆಯಾಗದ ಪ್ಲಾಸ್ಟಿಕ್ ಸೇರಿದ್ದು, ಜಲಚರಗಳಿಗೆ ಮಾರಕವಾಗಿ ಪರಣಿಮಿಸಿದೆ. ಇದು ಮಾನವರ ಆಹಾರ ಸರಪಳಿಯ ಮೇಲೆ ವ್ಯತಿರಿಕ್ತ ಪರಿಣಾಮಗಳ ಬೀರುತ್ತಿದೆ ಎಂದು ವರದಿಗಳು ಹೇಳುತ್ತಿವೆ.