ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್-19 ಪಿಡುಗಿನ ಪರಿಸ್ಥಿತಿ ನಿರ್ವಹಿಸುತ್ತಿರುವ ರೀತಿಯಲ್ಲಿ ಪ್ರಜಾಪ್ರಭುತ್ವದ ಹೊಣೆಗಾರಿಕೆ ಮಾಯವಾಗಿದೆ’ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಟೀಕಿಸಿದ್ದಾರೆ.
ಪ್ರಧಾನಿಗೆ ಪತ್ರ ಬರೆದಿರುವ ಅವರು, ‘ಈ ಪರಿಸ್ಥಿತಿಯಲ್ಲೂ ಅನಗತ್ಯ ವೆಚ್ಚಗಳನ್ನು ಮುಂದುವರಿಸಿದ್ದು, ರಾಜ್ಯಗಳ ಮೇಲೆ ಮಾತ್ರ ಆರ್ಥಿಕವಾಗಿ ಒತ್ತಡ ಹೇರುತ್ತಿದೆ’ ಎಂದಿದ್ದಾರೆ.