‘ಪ್ರತಿಯೊಬ್ಬ ದಂಗೆಕೋರರೂ ಮೌನವಾಗಿದ್ದಾರೆ. ಎಲ್ಲ ಉಪದ್ರವಿಗಳಿಗೂ ಆಘಾತವಾಗಿದೆ. ಯೋಗಿ ಆದಿತ್ಯನಾಥ್ ಸರ್ಕಾರ ಕೈಗೊಂಡ ಕಠಿಣ ಕ್ರಮದ ನಂತರ ಎಲ್ಲರೂ ಮೌನಕ್ಕೆ ಶರಣಾಗಿದ್ದಾರೆ. ಸಾರ್ವಜನಿಕ ಆಸ್ತಿಪಾಸ್ತಿಗೆ ಯಾರು ಹಾನಿ ಮಾಡಿದ್ದಾರೋ ಅವರೇ ಅದರ ನಷ್ಟ ತುಂಬಬೇಕು ಎಂದು ಮುಖ್ಯಮಂತ್ರಿ ಘೋಷಿಸಿದ್ದಾರೆ. ಪ್ರತಿಯೊಬ್ಬ ಹಿಂಸಾತ್ಮಕ ಪ್ರತಿಭಟನಾಕಾರನೂ ಈಗ ಅಳಲಿದ್ದಾನೆ, ಯಾಕೆಂದರೆ ಉತ್ತರ ಪ್ರದೇಶದಲ್ಲಿ ಈಗ ಯೋಗಿ ಸರ್ಕಾರವಿದೆ’ ಎಂದು#TheGreat_CMYogi ಎಂಬ ಹ್ಯಾಷ್ಟ್ಯಾಗ್ ಅಡಿಯಲ್ಲಿ ಯೋಗಿ ಆದಿತ್ಯನಾಥ್ ಕಚೇರಿಯಿಂದ ಟ್ವೀಟ್ ಮಾಡಲಾಗಿದೆ.