ಗೊಡ್ಡು ಬೆದರಿಕೆಗೆ ಹೆದರೋದಿಲ್ಲ: ಚಳಿಗಾಲದ ಅಧಿವೇಶನದ ವೇಳೆ ಸದನದ ಒಳಗೂ, ಹೊರಗೂ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೀಡಿರುವ ಹೇಳಿಕೆ ತಿರುಗೇಟು ನೀಡಿದ ಅವರು, ‘ಇಂತಹ ಗೊಡ್ಡು ಬೆದರಿಕೆಗೆ ಹೆದರೋದಿಲ್ಲ. ಅವರು (ಬಿಜೆಪಿಯವರು) ಒಂದು ಲಕ್ಷ ಜನ ಸೇರಿಸಿದರೆ, ನಾವು (ಕಾಂಗ್ರೆಸ್–ಜೆಡಿಎಸ್) ಎರಡು ಲಕ್ಷ ಜನರನ್ನು ಸೇರಿಸುತ್ತೇವೆ. ರೈತರು ಅವರ ಪರ ಮಾತ್ರ ಇದ್ದಾರಾ? ನಮ್ಮ ಪರವಾಗಿಯೂ ಇದ್ದಾರೆ. ರಾಜಕೀಯವಾಗಿ ನೀಡುವ ಇಂತಹ ಹೇಳಿಕೆಗಳಿಗೆ ಕಿಮ್ಮತ್ತಿಲ್ಲ’ ಎಂದರು.