ಬತ್ತದ ಉತ್ಸಾಹ: ತುಮಕೂರಿನಿಂದ ಬೆಂಗಳೂರಿಗೆ ಪಾದಯಾತ್ರೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಪ್ರತಿಭಟನಕಾರರು ತುಮಕೂರಿನ ಗಾಜಿನಮನೆ ಆವರಣದಲ್ಲಿ ಚಳಿ, ಬಿಸಿಲು, ಹಗಲು, ರಾತ್ರಿ ಲೆಕ್ಕಿಸದೆ ಕೇಂದ್ರ, ರಾಜ್ಯ ಸರ್ಕಾರದ ಮತ್ತು ಪೊಲೀಸ್ ಇಲಾಖೆಯ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಎತ್ತ ಕಣ್ಣಾಯಿಸಿದರೂ ಕೆಂಪು ಸೀರೆ, ಬಾವುಟ ಹಿಡಿದ ಅಂಗನವಾಡಿ ಕಾರ್ಯಕರ್ತೆಯರ ದಂಡು ಕಾಣುತ್ತಿತ್ತು.