ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನಕ್ಕೆ ಕತ್ತರಿ ಹಾಕಿದರೆ, ಇಲಾಖೆಯು ಅದನ್ನು ಯಕ್ಷಗಾನ ಅಕಾಡೆಮಿ ಮೇಲೆ ಹೊರೆಹಾಕಿದೆ. ಹಾಗಾಗಿ ಪ್ರತಿ ವರ್ಷ ಅಕಾಡೆಮಿಗೆ ಬರುತ್ತಿದ್ದ ₹1.10 ಕೋಟಿಯಷ್ಟು ಹಣ ಕಡಿತಗೊಂಡಿದೆ. ಈಗ ₹80 ಲಕ್ಷ ಮಾತ್ರ ಬರುತ್ತಿದೆ. ಇದರಲ್ಲಿ ಆಡಳಿತಾತ್ಮಕ ವೆಚ್ಚವನ್ನು ಕಳೆದರೆ, ₹38ಲಕ್ಷ ಉಳಿಯುತ್ತದೆ. ಇದರಲ್ಲಿ ರಾಜ್ಯದಾದ್ಯಂತ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕಾದ ಅನಿವಾರ್ಯತೆ ಅಕಾಡೆಮಿಗೆ ಎದುರಾಗಿದೆ ಎಂದು ಪ್ರೊ.ಹೆಗಡೆ ಬೇಸರ ವ್ಯಕ್ತಪಡಿಸಿದರು.