ಗುರುವಾರ ಇಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, 'ಕೋಲಾರಕ್ಕೆ ನೀರು ಹರಿಸುವ ವಿಚಾರ ವಿಧಾನಸಭೆಯಲ್ಲೂ ಚರ್ಚೆಯಾಗಿತ್ತು. ಕೆರೆಗೆ ನೀರು ಹರಿಸುವ ವಿಚಾರದಲ್ಲಿ ಸ್ವಲ್ಪ ಗೊಂದಲವಾಗಿತ್ತು. ಎಸ್ ಅಗ್ರಹಾರ ಕೆರೆ ಈಗಾಗಲೇ ತುಂಬಿದ್ದು, ಜನ್ನಘಟ್ಟ ಕೆರೆಗೆ ನೀರು ಹರಿಯಬೇಕಿದೆ. ಜನ್ನಘಟ್ಟದಿಂದ ಬೇರೆ ಕೆರೆಗೆ ನೀರು ತುಂಬಿಸಲು ಯೋಜನೆ ರೂಪಿಸಲಾಗಿದೆ. ಆ ಕಾರಣ, ಎಸ್ ಅಗ್ರಹಾರ ಕೆರೆ ವೀಕ್ಷಣೆ ಮಾಡಲು ಹೋದಾಗ ಘಟನೆ ನಡೆಯಿತು' ಎಂದರು.