ಎ.ಟಿ.ರಾಮಸ್ವಾಮಿ ಅವರು ಕಾಂಗ್ರೆಸ್, ಜೆಡಿಎಸ್ ಶಾಸಕರ ರಾಜೀನಾಮೆ, ಈಗಿನ ರಾಜಕಾರಣವನ್ನು ತಮ್ಮದೇ ವ್ಯಂಗ್ಯಭರಿತ ಧಾಟಿಯಲ್ಲಿ ವ್ಯಾಖ್ಯಾನಿಸಿ, ಮಹಾಭಾರತದಲ್ಲಿ ದ್ರೌಪದಿ ಸೀರೆ ಸೆಳೆಯುವ ಪ್ರಸಂಗಕ್ಕೆ ಹೋಲಿಸಿದರು. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಮಾತನಾಡಿದ ಕೆ.ಎಂ.ಶಿವಲಿಂಗೇಗೌಡ, ‘ಈಗ ನಾವೂ ವಸ್ತ್ರಾಪಹರಣಕ್ಕೆ ಒಳಗಾಗಿದ್ದೇವೆ. ಸಾಮಾಜಿಕ ಜಾಲತಾಣಗಳಿಂದಾಗಿ ಸದನದಲ್ಲಿ ಕುಳಿತುಕೊಳ್ಳುವಂತಿಲ್ಲ. ಶಾಸಕ ಅರವಿಂದ ಲಿಂಬಾವಳಿ ಅವರ ವಿಡಿಯೊ ನೋಡಿದ ಜನರು ನಮ್ಮನ್ನೂ ಪ್ರಶ್ನಿಸಿ, ಅವಮಾನಿಸುತ್ತಿದ್ದಾರೆ. ಶಾಸಕರನ್ನು ಇದೇ ರೀತಿ ನೋಡುವಂತಾಗಿದೆ’ ಎಂದರು.