ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲು ಮತದಾನ ಮಾಡಿದವರ ಸಂಭ್ರಮ

Last Updated 5 ಡಿಸೆಂಬರ್ 2019, 15:17 IST
ಅಕ್ಷರ ಗಾತ್ರ

ಅಥಣಿ ಕ್ಷೇತ್ರದಲ್ಲಿ ಮೊದಲ ಮತ ಚಲಾಯಿಸಿದವರು ತಮ್ಮ ಖುಷಿ ಹಂಚಿಕೊಂಡ ಬಗೆಯಿದು.

ಪ್ರತಿ ಮತವೂ ಅಮೂಲ್ಯ

ಮತದಾನ ಮಾಡುವುದು ಅರ್ಹರಾದ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಜನರಿಗಾಗಿ ಇರುವ ಸರ್ಕಾರದ ರಚನೆಗಾಗಿ ಪ್ರತಿ ಮತವೂ ಅಮೂಲ್ಯವಾಗಿದೆ. ಅದನ್ನು ತಪ್ಪದೇ ಚಲಾಯಿಸಬೇಕು.

– ಪೂಜಾ ಕೋರಿ, ಅಥಣಿ

ಖುಷಿಯಾಯಿತು

ಮೊದಲ ಬಾರಿಗೆ ಮತದಾನ ಮಾಡಿದ್ದು ಖುಷಿ ತಂದಿದೆ. ಸಮಾಜದ ಅಭಿವೃದ್ಧಿಗಾಗಿ ನನ್ನ ಕರ್ತವ್ಯವನ್ನು ನಾನು ನಿಭಾಯಿಸಿದ್ದೇನೆ.

– ಸಚಿನ ಬಸರಿಖೋಡಿ, ಅಥಣಿ

ಪರಿಹಾರ ಕೊಡಿಸಲಿ

ಕೃಷ್ಣಾ ನದಿ ನೆರೆಯಿಂದ ಸಂತ್ರಸ್ತರಾದವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಕಾಮಗಾರಿಗಳಿಗೆ ಬೇಕಾಗಿರುವ ಅನುದಾನ ಬಂದಿಲ್ಲ. ಈ ನಡುವೆಯೂ, ಅಮೂಲ್ಯವಾದ ಮತವನ್ನು ಚಲಾಯಿಸಿದ್ದೇನೆ. ಆಯ್ಕೆಯಾದವರು ಸಂತ್ರಸ್ತರ ಸಂಕಷ್ಟಗಳಿಗೆ ಸ್ಪಂದಿಸಲಿ.

– ಲಕ್ಷ್ಮಿ ನಾಂದಣೀಕರ, ಅಥಣಿ

ಭವ್ಯ ಭಾರತಕ್ಕಾಗಿ

ಪಕ್ಷಾಂತರದ ಪರ್ವವಿದು. ಯಾವುದೇ ಆಮಿಷಕ್ಕೆ ಬಲಿಯಾಗದೇ ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ. ಭವ್ಯ ಭಾರತಕ್ಕಾಗಿ ಮತ ಹಾಕಿದ್ದೇನೆ.

– ಮಂದಾಕಿನ ಕಟಾವಿ, ಅಥಣಿ

ಅಭಿವೃದ್ಧಿಗಾಗಿ...

ನಾನು ಇದೇ ಮೊದಲ ಬಾರಿಗೆ ಮತದಾನ ಮಾಡಿದ್ದಕ್ಕೆ ಖುಷಿಯಾಗಿದೆ. ಪ್ರವಾಹದಿಂದ ತತ್ತರಿಸಿದವರಿಗೆ ಅನುಕೂಲವಾಗಲಿ, ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲಿ ಎಂದು ಮತ ಹಾಕಿದ್ದೇನೆ.

– ಮಯೂರಿ ಪಾಟೀಲ, ಅಥಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT