<p><strong>ಬೆಂಗಳೂರು:</strong> ‘ವಾಸ್ತವವಾಗಿ ಒಬ್ಬ ಉಪಮುಖ್ಯಮಂತ್ರಿ ಸಾಕಿತ್ತು. ದಲಿತ ನಾಯಕ ಎಂಬ ಕಾರಣಕ್ಕೆ ಗೋವಿಂದ ಕಾರಜೋಳ ಅವರೊಬ್ಬರೇ ಇರಬಹುದಿತ್ತು. ಆದರೆ ಮೂವರನ್ನು ಮಾಡಿದ್ದೀರಿ, ಯಡಿಯೂರಪ್ಸ ಕುರ್ಚಿಉಳಿಯಬೇಕಾದರೆ ಇನ್ನೂ ಇಬ್ಬರನ್ನು ಮಾಡಬೇಕಾಗುತ್ತದೆ’ ಎಂದು ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಕುಟುಕಿದರು.</p>.<p>ಪರಿಷತ್ನಲ್ಲಿ ಗುರುವಾರ ರಾಜ್ಯಪಾಲರ ಭಾಷಣಕ್ಕೆ ವಂದನೆ ಸೂಚಿಸುವ ಗೊತ್ತುವಳಿ ಮೇಲೆ ಮಾತನಾಡಿ, ‘ರಾಜಾಹುಲಿ ನಿಮ್ಮ ಕೈಯಲ್ಲಿ ಸಿಲುಕಿ ಪಂಜರದ ಹುಲಿಯಂತೆ ಒದ್ದಾಡುತ್ತಿದೆ’ ಎಂದು ಚುಚ್ಚಿದರು.</p>.<p>‘ಮುಖ್ಯಮಂತ್ರಿಯಾಗಿದ್ದ ಜಗದೀಶ ಶೆಟ್ಟರ್ ಮಂತ್ರಿಯಾಗಲೇಬಾರದಿತ್ತು. ಈ ಹಿಂದೆ ಉಪಮುಖ್ಯಮಂತ್ರಿಗಳಾಗಿದ್ದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ ಅವರೂ ಮಂತ್ರಿ ಆಗಬಾರದಿತ್ತು. ಆದರೆ ಇಂದು ಡಿಸಿಎಂ ಮಾಡುವ ವಿಚಾರದಲ್ಲಿ ಬಿಜೆಪಿ ದಾಖಲೆ ಬರೆದು ಬಿಟ್ಟಿದೆ. ಯಾರದೋ ದುಡ್ಡು, ಯಲ್ಲಮ್ಮನ ಜಾತ್ರೆಯಂತಾಗಿದೆ’ ಎಂದು ಟೀಕಿಸಿದರು.</p>.<p>‘ಹೊರಟ್ಟಿಯವರನ್ನು ಪಕ್ಷ ಹೇಗೆ ನಡೆಸಿಕೊಂಡಿದೆ?’ ಎಂದು ರವಿಕುಮಾರ್ ಕಾಲೆಳೆದಾಗ, ‘ಅದು ನನ್ನ ಹಣೆಬರಹ, ಯಾವ ಕಾರಣಕ್ಕೂ ನಾನು ಪಕ್ಷ ಬಿಟ್ಟು ಹೋಗುವವನಲ್ಲ’ ಎಂದರು.</p>.<p><strong>ದುಡ್ಡಿದ್ದವರಿಗೆ ಮೇಲ್ಮನೆ</strong><br />‘ದುಡ್ಡಿದ್ದವರಷ್ಟೇ ಮೇಲ್ಮನೆಗೆ ಬರುತ್ತಾರೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದು ತೀವ್ರ ಚರ್ಚೆಗೆ ಕಾರಣವಾಯಿತು.</p>.<p>‘ಮೇಲ್ಮನೆಗೆ ಕಲಾವಿದರು, ಬುದ್ಧಿಜೀವಿಗಳು ಬರುವುದು ವಿರಳವಾಗಿದೆ, ದುಡ್ಡಿದ್ದವರು, ಚುನಾವಣೆಯಲ್ಲಿ ಸೋತವರಿಗೆ ಆಸರೆತಾಣವಾಗಿದೆ’ ಎಂದು ಅವರು ಹೇಳಿದಾಗ ಕಾಂಗ್ರೆಸ್ ಮತ್ತು ಜೆಡಿಎಸ್ನ ಹಲವು ಸದಸ್ಯರು ತಿರುಗಿಬಿದ್ದರು. ಸಚಿವ ಸೋಮಣ್ಣ ಅವರು ತಾವೇ ಎರಡು ಬಾರಿ ವಿಧಾನ ಪರಿಷತ್ಗೆ ಪ್ರವೇಶಿಸಿದ್ದನ್ನು ಉಲ್ಲೇಖಿಸಿ,ಸುಧಾಕರ್ ಮಾತನ್ನು ಖಂಡಿಸಿದರು.</p>.<p>‘ಸುಧಾಕರ್, ಮುಂದೆ ನೀವೇ ಇಲ್ಲಿಗೆ ಬರುವ ಸ್ಥಿತಿ ನಿರ್ಮಾಣವಾಗಬಹುದು’ ಎಂದು ಸೋಮಣ್ಣ ಎಚ್ಚರಿಸಿದರು. ‘113 ವರ್ಷ ಇತಿಹಾಸ ಇರುವ ಈ ಮೇಲ್ಮನೆಯನ್ನು ಲಘುವಾಗಿ ಪರಿಗಣಿಸಬೇಡಿ’ ಎಂದು ಹೊರಟ್ಟಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ವಾಸ್ತವವಾಗಿ ಒಬ್ಬ ಉಪಮುಖ್ಯಮಂತ್ರಿ ಸಾಕಿತ್ತು. ದಲಿತ ನಾಯಕ ಎಂಬ ಕಾರಣಕ್ಕೆ ಗೋವಿಂದ ಕಾರಜೋಳ ಅವರೊಬ್ಬರೇ ಇರಬಹುದಿತ್ತು. ಆದರೆ ಮೂವರನ್ನು ಮಾಡಿದ್ದೀರಿ, ಯಡಿಯೂರಪ್ಸ ಕುರ್ಚಿಉಳಿಯಬೇಕಾದರೆ ಇನ್ನೂ ಇಬ್ಬರನ್ನು ಮಾಡಬೇಕಾಗುತ್ತದೆ’ ಎಂದು ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಕುಟುಕಿದರು.</p>.<p>ಪರಿಷತ್ನಲ್ಲಿ ಗುರುವಾರ ರಾಜ್ಯಪಾಲರ ಭಾಷಣಕ್ಕೆ ವಂದನೆ ಸೂಚಿಸುವ ಗೊತ್ತುವಳಿ ಮೇಲೆ ಮಾತನಾಡಿ, ‘ರಾಜಾಹುಲಿ ನಿಮ್ಮ ಕೈಯಲ್ಲಿ ಸಿಲುಕಿ ಪಂಜರದ ಹುಲಿಯಂತೆ ಒದ್ದಾಡುತ್ತಿದೆ’ ಎಂದು ಚುಚ್ಚಿದರು.</p>.<p>‘ಮುಖ್ಯಮಂತ್ರಿಯಾಗಿದ್ದ ಜಗದೀಶ ಶೆಟ್ಟರ್ ಮಂತ್ರಿಯಾಗಲೇಬಾರದಿತ್ತು. ಈ ಹಿಂದೆ ಉಪಮುಖ್ಯಮಂತ್ರಿಗಳಾಗಿದ್ದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ ಅವರೂ ಮಂತ್ರಿ ಆಗಬಾರದಿತ್ತು. ಆದರೆ ಇಂದು ಡಿಸಿಎಂ ಮಾಡುವ ವಿಚಾರದಲ್ಲಿ ಬಿಜೆಪಿ ದಾಖಲೆ ಬರೆದು ಬಿಟ್ಟಿದೆ. ಯಾರದೋ ದುಡ್ಡು, ಯಲ್ಲಮ್ಮನ ಜಾತ್ರೆಯಂತಾಗಿದೆ’ ಎಂದು ಟೀಕಿಸಿದರು.</p>.<p>‘ಹೊರಟ್ಟಿಯವರನ್ನು ಪಕ್ಷ ಹೇಗೆ ನಡೆಸಿಕೊಂಡಿದೆ?’ ಎಂದು ರವಿಕುಮಾರ್ ಕಾಲೆಳೆದಾಗ, ‘ಅದು ನನ್ನ ಹಣೆಬರಹ, ಯಾವ ಕಾರಣಕ್ಕೂ ನಾನು ಪಕ್ಷ ಬಿಟ್ಟು ಹೋಗುವವನಲ್ಲ’ ಎಂದರು.</p>.<p><strong>ದುಡ್ಡಿದ್ದವರಿಗೆ ಮೇಲ್ಮನೆ</strong><br />‘ದುಡ್ಡಿದ್ದವರಷ್ಟೇ ಮೇಲ್ಮನೆಗೆ ಬರುತ್ತಾರೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದು ತೀವ್ರ ಚರ್ಚೆಗೆ ಕಾರಣವಾಯಿತು.</p>.<p>‘ಮೇಲ್ಮನೆಗೆ ಕಲಾವಿದರು, ಬುದ್ಧಿಜೀವಿಗಳು ಬರುವುದು ವಿರಳವಾಗಿದೆ, ದುಡ್ಡಿದ್ದವರು, ಚುನಾವಣೆಯಲ್ಲಿ ಸೋತವರಿಗೆ ಆಸರೆತಾಣವಾಗಿದೆ’ ಎಂದು ಅವರು ಹೇಳಿದಾಗ ಕಾಂಗ್ರೆಸ್ ಮತ್ತು ಜೆಡಿಎಸ್ನ ಹಲವು ಸದಸ್ಯರು ತಿರುಗಿಬಿದ್ದರು. ಸಚಿವ ಸೋಮಣ್ಣ ಅವರು ತಾವೇ ಎರಡು ಬಾರಿ ವಿಧಾನ ಪರಿಷತ್ಗೆ ಪ್ರವೇಶಿಸಿದ್ದನ್ನು ಉಲ್ಲೇಖಿಸಿ,ಸುಧಾಕರ್ ಮಾತನ್ನು ಖಂಡಿಸಿದರು.</p>.<p>‘ಸುಧಾಕರ್, ಮುಂದೆ ನೀವೇ ಇಲ್ಲಿಗೆ ಬರುವ ಸ್ಥಿತಿ ನಿರ್ಮಾಣವಾಗಬಹುದು’ ಎಂದು ಸೋಮಣ್ಣ ಎಚ್ಚರಿಸಿದರು. ‘113 ವರ್ಷ ಇತಿಹಾಸ ಇರುವ ಈ ಮೇಲ್ಮನೆಯನ್ನು ಲಘುವಾಗಿ ಪರಿಗಣಿಸಬೇಡಿ’ ಎಂದು ಹೊರಟ್ಟಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>