‘ಮೇಲ್ಮನೆಗೆ ಕಲಾವಿದರು, ಬುದ್ಧಿಜೀವಿಗಳು ಬರುವುದು ವಿರಳವಾಗಿದೆ, ದುಡ್ಡಿದ್ದವರು, ಚುನಾವಣೆಯಲ್ಲಿ ಸೋತವರಿಗೆ ಆಸರೆತಾಣವಾಗಿದೆ’ ಎಂದು ಅವರು ಹೇಳಿದಾಗ ಕಾಂಗ್ರೆಸ್ ಮತ್ತು ಜೆಡಿಎಸ್ನ ಹಲವು ಸದಸ್ಯರು ತಿರುಗಿಬಿದ್ದರು. ಸಚಿವ ಸೋಮಣ್ಣ ಅವರು ತಾವೇ ಎರಡು ಬಾರಿ ವಿಧಾನ ಪರಿಷತ್ಗೆ ಪ್ರವೇಶಿಸಿದ್ದನ್ನು ಉಲ್ಲೇಖಿಸಿ,ಸುಧಾಕರ್ ಮಾತನ್ನು ಖಂಡಿಸಿದರು.