ಮೈಸೂರು: ವೀರ್ ಸಾವರ್ಕರ್ ಅವರಿಗೆ ‘ಭಾರತ ರತ್ನ’ ನೀಡುವ ಬಿಜೆಪಿಯ ಪ್ರಸ್ತಾವ ವನ್ನು ಶನಿವಾರ ಮತ್ತೆ ಟೀಕಿ ಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಚುನಾವಣೆ ಬಂದಾಗಲೆಲ್ಲ ಈ ಪಕ್ಷವು ಅಭಿವೃದ್ಧಿ ವಿಷಯಗಳನ್ನು ಮರೆಮಾಚಿ, ಜನರ ಭಾವನೆಗಳನ್ನು ಪ್ರಚೋದಿಸುವ ಹಾಗೂ ಹಿಂದುತ್ವದ ವಿಚಾರಗಳನ್ನು ಮುನ್ನೆಲೆಗೆ ತರುತ್ತಿದೆ. ಹಿಂದಿನಿಂದಲೂ ಅದನ್ನೇ ಮಾಡಿಕೊಂಡು ಬಂದಿದೆ’ ಎಂದು ವಾಗ್ದಾಳಿ ನಡೆಸಿದರು.