<p><strong>ಬೆಂಗಳೂರು:</strong> ರಾಜಕಾರಣಿಗಳು ಎಂದರೆ ಪರಸ್ಪರ ಬೈದಾಡಿಕೊಳ್ಳುತ್ತಲೇ, ಗುದ್ದಾಡುತ್ತಲೇ ಇರುವವರು ಎಂಬ ಭಾವನೆ ಕರಗಿ ಅವರಲ್ಲೂ ಪ್ರೀತಿ, ಸ್ನೇಹ ಮತ್ತು ಆರ್ದ್ರತೆ ಇದೆ ಎಂಬುದಕ್ಕೆಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿನಂದನಾ ಸಮಾರಂಭ ಸಾಕ್ಷಿಯಾಯಿತು.</p>.<p>ಅರಮನೆ ಆವರಣದ ವೈಟ್ ಪೆಟಲ್ಸ್ನಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಬಿಜೆಪಿ ಸಿದ್ಧಾಂತದ ಕಡು ಟೀಕಾಕಾರ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹಾಜರಿ ಕಾರ್ಯಕ್ರಮಕ್ಕೆ ವಿಶಿಷ್ಟ ಆಯಾಮವನ್ನೇ ನೀಡಿತು.</p>.<p>ಸಿದ್ದರಾಮಯ್ಯ ತಮ್ಮ ಎಂದಿನ ಮಾತು,ನಗು, ನಡಿಗೆಯ ಶೈಲಿಯಿಂದ ಬಿಜೆಪಿ ಮತ್ತು ಯಡಿಯೂರಪ್ಪ ಅಭಿಮಾನಿಗಳಿಂದ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಂಡಿದ್ದೂ ಅಲ್ಲದೇ, ‘ಹೌದಾ ಹುಲಿಯಾ’ ಎಂದೂ ಅಭಿಮಾನದ ಕೂಗನ್ನೂ ಹಾಕಿಸಿಕೊಂಡರು.</p>.<p>ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಭಾವನೆಯೂ ಇದೇ ಆಗಿತ್ತು. ‘ಕೆಲವು ಸಂದರ್ಭಗಳಲ್ಲಿ ರಾಜಕೀಯವನ್ನು ಬದಿಗಿಟ್ಟು ವಿಭಿನ್ನ ವಿಚಾರಧಾರೆಯ ರಾಜಕಾರಣಿಗಳು ಪರಸ್ಪರ ಸೇರಬೇಕು.<br />ಸ್ನೇಹ ಮತ್ತು ಮನುಷ್ಯತ್ವಕ್ಕೆ ಬೆಲೆ ನೀಡಬೇಕು. ಈ ಕಾರ್ಯಕ್ರಮ ಅದಕ್ಕೊಂದು ಮೇಲ್ಪಂಕ್ತಿಯಾಗಿದೆ’ ಎಂದರು.</p>.<p>ನಿರಂತರ ಹೋರಾಟಗಳ ಮೂಲಕ ಯಡಿಯೂರಪ್ಪ ಕರ್ನಾಟಕ ಮಾತ್ರವಲ್ಲ, ರಾಷ್ಟ್ರ ಮಟ್ಟದ ವರ್ಚಸ್ವಿ ನಾಯಕರೂ ಹೌದು<br /><strong>-ರಾಜನಾಥ್ ಸಿಂಗ್ ರಕ್ಷಣಾ ಸಚಿವ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ರಾಜಕಾರಣಿಗಳು ಎಂದರೆ ಪರಸ್ಪರ ಬೈದಾಡಿಕೊಳ್ಳುತ್ತಲೇ, ಗುದ್ದಾಡುತ್ತಲೇ ಇರುವವರು ಎಂಬ ಭಾವನೆ ಕರಗಿ ಅವರಲ್ಲೂ ಪ್ರೀತಿ, ಸ್ನೇಹ ಮತ್ತು ಆರ್ದ್ರತೆ ಇದೆ ಎಂಬುದಕ್ಕೆಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿನಂದನಾ ಸಮಾರಂಭ ಸಾಕ್ಷಿಯಾಯಿತು.</p>.<p>ಅರಮನೆ ಆವರಣದ ವೈಟ್ ಪೆಟಲ್ಸ್ನಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಬಿಜೆಪಿ ಸಿದ್ಧಾಂತದ ಕಡು ಟೀಕಾಕಾರ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹಾಜರಿ ಕಾರ್ಯಕ್ರಮಕ್ಕೆ ವಿಶಿಷ್ಟ ಆಯಾಮವನ್ನೇ ನೀಡಿತು.</p>.<p>ಸಿದ್ದರಾಮಯ್ಯ ತಮ್ಮ ಎಂದಿನ ಮಾತು,ನಗು, ನಡಿಗೆಯ ಶೈಲಿಯಿಂದ ಬಿಜೆಪಿ ಮತ್ತು ಯಡಿಯೂರಪ್ಪ ಅಭಿಮಾನಿಗಳಿಂದ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಂಡಿದ್ದೂ ಅಲ್ಲದೇ, ‘ಹೌದಾ ಹುಲಿಯಾ’ ಎಂದೂ ಅಭಿಮಾನದ ಕೂಗನ್ನೂ ಹಾಕಿಸಿಕೊಂಡರು.</p>.<p>ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಭಾವನೆಯೂ ಇದೇ ಆಗಿತ್ತು. ‘ಕೆಲವು ಸಂದರ್ಭಗಳಲ್ಲಿ ರಾಜಕೀಯವನ್ನು ಬದಿಗಿಟ್ಟು ವಿಭಿನ್ನ ವಿಚಾರಧಾರೆಯ ರಾಜಕಾರಣಿಗಳು ಪರಸ್ಪರ ಸೇರಬೇಕು.<br />ಸ್ನೇಹ ಮತ್ತು ಮನುಷ್ಯತ್ವಕ್ಕೆ ಬೆಲೆ ನೀಡಬೇಕು. ಈ ಕಾರ್ಯಕ್ರಮ ಅದಕ್ಕೊಂದು ಮೇಲ್ಪಂಕ್ತಿಯಾಗಿದೆ’ ಎಂದರು.</p>.<p>ನಿರಂತರ ಹೋರಾಟಗಳ ಮೂಲಕ ಯಡಿಯೂರಪ್ಪ ಕರ್ನಾಟಕ ಮಾತ್ರವಲ್ಲ, ರಾಷ್ಟ್ರ ಮಟ್ಟದ ವರ್ಚಸ್ವಿ ನಾಯಕರೂ ಹೌದು<br /><strong>-ರಾಜನಾಥ್ ಸಿಂಗ್ ರಕ್ಷಣಾ ಸಚಿವ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>