ಕೇರಳ– ಕರ್ನಾಟಕ ಗಡಿ ದಿಗ್ಬಂಧನದಿಂದ ಮಂಗಳೂರಿಗೆ ತೆರಳಿ ಸೂಕ್ತ ಚಿಕಿತ್ಸೆ ಪಡೆಯಲಾಗದೆ ಒಂಬತ್ತು ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಕಾಸರಗೋಡಿನಲ್ಲಿರುವ ಹೃದ್ರೋಗಿಗಳು, ಡಯಾಲಿಸಿಸ್, ಕ್ಯಾನ್ಸರ್ ಪೀಡಿತರು ಸೇರಿದಂತೆ ಶೇ 75ರಷ್ಟು ರೋಗಿಗಳು ಮಂಗಳೂರಿನ ಆಸ್ಪತ್ರೆಗಳನ್ನುಆಶ್ರಯಿಸಿದ್ದಾರೆ. ಆದರೆ, ಸೋಂಕು ಹರಡುವಿಕೆ ನಿಯಂತ್ರಣ ದೃಷ್ಟಿಯಿಂದ ದಿಗ್ಬಂಧನ ಸರಿಯಾದ ನಿರ್ಧಾರ ಎನ್ನುತ್ತಾರೆ ಕಾಸರಗೋಡಿನ ವೈದ್ಯರು.