ಪಾಟೀಲ ಅವರು ಸುಮಾರು ಒಂದೂವರೆ ಗಂಟೆ ಕಾಲ ಮಾತನಾಡಿ, ಸಂತ್ರಸ್ತರ ಪರಿಹಾರ ವಿಚಾರಕ್ಕೆ ಬಂದರು. ಪರಿಹಾರ ನೀಡಿ, ಮತ್ತೆ ವಾಪಸ್ ತೆಗೆದುಕೊಂಡಿದ್ದನ್ನು ಉಲ್ಲೇಖಿಸಿದರು. ಈ ಹಂತದಲ್ಲಿ ಮೃತರ ಮನೆಗೆ ಉಸ್ತುವಾರಿ ಸಚಿವರು ಹೋಗದ ವಿಚಾರವನ್ನು ಕಾಂಗ್ರೆಸ್ನಐವನ್ ಡಿಸೋಜಾ ಪ್ರಸ್ತಾಪಿಸಿದರು. ಮುಖ್ಯಮಂತ್ರಿ ಅವರು ಸಂತ್ರಸ್ತರ ಮನೆಗೆ ಹೋಗುವುದು ಬೇಡ ಎಂದು ಹೇಳಿದವರೇ ಐವನ್ ಡಿಸೋಜಾ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ನೀವು ಯಾಕೆ ಅವರ ಮನೆಗೆ ಹೋಗಿಲ್ಲ ಎಂದು ಐವನ್ ಅವರು ಕೋಟ ಅವರನ್ನು ಪ್ರಶ್ನಿಸಿದರು.