‘ಪಿಎಂಜಿಕೆವೈ ಯೋಜನೆಯಡಿಯಲ್ಲಿ 3 ತಿಂಗಳು 5 ಕೆ.ಜಿ. ಅಕ್ಕಿ, 1 ಕೆ.ಜಿ. ಬೇಳೆ ಕೊಡುತ್ತಿದ್ದು, ಮೇ 1ರಿಂದ ರಾಜ್ಯದ 19,800 ನ್ಯಾಯಬೆಲೆ ಅಂಗಡಿಗಳಲ್ಲಿ ಇದನ್ನು ವಿತರಿಸಲಾಗುವುದು. ರಾಜ್ಯದಲ್ಲಿರುವ 1.19 ಕೋಟಿ ಪಡಿತರ ಚೀಟಿದಾರರಿಗೆ ಕೇಂದ್ರದಿಂದ ಉಚಿತ ಆಹಾರಧಾನ್ಯ ಪೂರೈಕೆಯಾದರೆ, 8 ಲಕ್ಷ ಪಡಿತರ ಚೀಟಿದಾರರಿಗೆ ರಾಜ್ಯದಿಂದ ಪೂರೈಕೆಯಾಗುತ್ತದೆ. ಸರ್ಕಾರ ಇದಕ್ಕಾಗಿ 3 ತಿಂಗಳ ಅವಧಿಗೆ ₹ 148 ಕೋಟಿ ಅನುದಾನಕ್ಕೆ ಅಂಗೀಕಾರ ನೀಡಿದೆ’ ಎಂದು ಅವರು ವಿವರಿಸಿದರು.