ತಾಲ್ಲೂಕಿನ ಶ್ರೀರಾಮನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು,‘ಪ್ರಸ್ತುತ ಚುನಾವಣೆಯಲ್ಲಿಯೂ ಕೂಡಾ ಇವಿಎಂ ಮತ್ತು ವಿವಿ ಪ್ಯಾಟ್ ಬಗ್ಗೆ ಅನುಮಾನ ಇದೆ.ಮತದಾನದ ಬಗ್ಗೆಯೂ ಸಂಶಯ ಮೂಡುವಂತೆ ಮಾಡಿದ್ದು ಮೋದಿ ಸಾಧನೆ. ಮೋದಿ ಗೆದ್ದರೆ ಈ ದೇಶ ಸುರಕ್ಷಿತವಾಗಿರಲ್ಲ. ದೌರ್ಜನ್ಯ–ದಬ್ಬಾಳಿಕೆ ಮತ್ತಷ್ಟು ಹೆಚ್ಚಾಗುತ್ತವೆ’ ಎಂದರು.