ಮದುವೆ ಬೇಡವೆಂದರೂ ಮನೆಯವರು ಕೇಳಲಿಲ್ಲ. ರಹಸ್ಯವಾಗಿ ದೇವಾಲಯದಲ್ಲಿ ಮದುವೆ ಮಾಡುವ ಚಿಂತನೆ ನಡೆದಿತ್ತು. ಪಂಜರದಲ್ಲಿ ಸಿಲುಕಿದ ಗಿಳಿಯಂತಾಗಿದ್ದ ಕಾವ್ಯಶ್ರೀ, ಮನದಲ್ಲಿ ನಾಲ್ಕು ಅಂಕಿಗಳು ಮೂಡಿದವು, ಅವು 1098. ಧೈರ್ಯ ಮಾಡಿ ಸಹಾಯವಾಣಿಗೆ ಕರೆ ಮಾಡಿ ಮದುವೆ ವಿಚಾರ ತೆರೆದಿಟ್ಟಳು. ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಮನೆಗೆ ಬಂದರು. ಕಾವ್ಯಶ್ರೀಯ ಶಿಕ್ಷಕರೂ ಬಂದು ‘ಪ್ರತಿಭಾವಂತೆಯಾಗಿರುವ ನಿಮ್ಮ ಮಗಳಿಗೆ ಈಗಲೇ ಮದುವೆ ಬೇಡ’ ಎಂದು ತಿಳಿ ಹೇಳಿದರು. ಬಾಲ್ಯವಿವಾಹ ರದ್ದಾಯಿತು.