‘ಉಪ ಚುನಾವಣೆ ನಡೆದ ತಕ್ಷಣ ಈಗಿನ ಸರ್ಕಾರ ಬಿದ್ದುಹೋಗುತ್ತದೆ. ಪುನಃ ಚುನಾವಣೆ ನಡೆಯಲಿದೆ ಎಂದು ಮೇಲಿಂದ ಮೇಲೆ ಹೇಳುತ್ತಿದ್ದೀರಿ ಏಕಿಷ್ಟು ಅರ್ಜೆಂಟು?’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ತಿವಿದ ಅವರು, ‘ಹೊಸ ಸರ್ಕಾರ ಬರಬೇಕಾದರೆ ಇನ್ನೂ 5– 6 ತಿಂಗಳು ಬೇಕು. ಅಲ್ಲಿಯವರೆಗೆ ಇನ್ನೂ ಎಷ್ಟು ಜನ ರೈತರು ಸಾಯಬೇಕು? ಎಂದು ಹರಿಹಾಯ್ದರು.