<p><strong>ಮೋಳೆ (ಬೆಳಗಾವಿ ಜಿಲ್ಲೆ):</strong> ‘ಬಿಜೆಪಿ ಜೊತೆ ಸರ್ಕಾರ ನಡೆಸುವುದಾಗಿದ್ದರೆ ಲೋಕಸಭಾ ಚುನಾವಣೆಗಿಂತಲೂ ಮುಂಚೆಯೇ ನಡೆಸುತ್ತಿದ್ದೆ. ನನಗೆ ಪ್ರಧಾನಮಂತ್ರಿ ಅವರಿಂದಲೇ ಆಹ್ವಾನ ಬಂದಿತ್ತು. ಮುಖ್ಯಮಂತ್ರಿ ಮಾಡುತ್ತೇನೆ ಬನ್ನಿ ಎಂದು ಕರೆದಿದ್ದರು. ಆದರೆ, ನಾನು ಹೋಗಲಿಲ್ಲ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.</p>.<p>ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಜುಗೂಳ ಗ್ರಾಮದ ನೆರೆ ಸಂತ್ರಸ್ತರ ಅಹವಾಲು ಸ್ವೀಕರಿಸಲು ಬಂದಿದ್ದಾಗ ಅವರು ಸುದ್ದಿಗಾರರ ಜೊತೆ ಮಾತನಾಡಿದರು.</p>.<p>‘ನಾನು ಯಾರ ಹಂಗಿನಲ್ಲಿಲ್ಲ. ಇಂಥವರಿಗೆ ಬೆಂಬಲ ಕೊಡುತ್ತೇನೆಂದು ಯಾರಿಗೂ ಬರೆದು ಕೊಟ್ಟಿಲ್ಲ’ ಎಂದು ಹೇಳುವ ಮೂಲಕ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದರು.</p>.<p>‘ನಾನ್ಯಾಕೆ ಹೇಳುತ್ತಿದ್ದೇನೆಂದರೆ, ನನಗೆ ರಾಜಕೀಯ ಮುಖ್ಯವಲ್ಲ. ಜನರು ಮುಖ್ಯ. ಅವರ ಸಮಸ್ಯೆಗಳು ಬಗೆಹರಿಯಬೇಕು. ಸರ್ಕಾರ ಕೆಡವಿ, ಮತ್ತೊಮ್ಮೆ ಸರ್ಕಾರ ಬರುವವರೆಗೆ ಇಲ್ಲಿನ ಜನರು ಬೀದಿಯಲ್ಲಿಯೇ ಬಿದ್ದಿರಬೇಕಾ?’ ಎಂದು ಪ್ರಶ್ನಿಸಿದರು.</p>.<p>‘ಉಪ ಚುನಾವಣೆ ನಡೆದ ತಕ್ಷಣ ಈಗಿನ ಸರ್ಕಾರ ಬಿದ್ದುಹೋಗುತ್ತದೆ. ಪುನಃ ಚುನಾವಣೆ ನಡೆಯಲಿದೆ ಎಂದು ಮೇಲಿಂದ ಮೇಲೆ ಹೇಳುತ್ತಿದ್ದೀರಿ ಏಕಿಷ್ಟು ಅರ್ಜೆಂಟು?’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ತಿವಿದ ಅವರು, ‘ಹೊಸ ಸರ್ಕಾರ ಬರಬೇಕಾದರೆ ಇನ್ನೂ 5– 6 ತಿಂಗಳು ಬೇಕು. ಅಲ್ಲಿಯವರೆಗೆ ಇನ್ನೂ ಎಷ್ಟು ಜನ ರೈತರು ಸಾಯಬೇಕು? ಎಂದು ಹರಿಹಾಯ್ದರು.</p>.<p>‘ರಾಜ್ಯದಲ್ಲಿ ಯಾವ ಪಕ್ಷದ ಆಡಳಿತ ಇರುತ್ತದೆಯೋ, ಯಾರು ಮುಖ್ಯಮಂತ್ರಿ ಯಾಗಿರುತ್ತಾರೋ ಎಂಬುದು ಮುಖ್ಯವಲ್ಲ. ರಾಜ್ಯದ ಜನರ ಸಮಸ್ಯೆ ಬಗೆಹರಿಯುವುದು ಮುಖ್ಯ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೋಳೆ (ಬೆಳಗಾವಿ ಜಿಲ್ಲೆ):</strong> ‘ಬಿಜೆಪಿ ಜೊತೆ ಸರ್ಕಾರ ನಡೆಸುವುದಾಗಿದ್ದರೆ ಲೋಕಸಭಾ ಚುನಾವಣೆಗಿಂತಲೂ ಮುಂಚೆಯೇ ನಡೆಸುತ್ತಿದ್ದೆ. ನನಗೆ ಪ್ರಧಾನಮಂತ್ರಿ ಅವರಿಂದಲೇ ಆಹ್ವಾನ ಬಂದಿತ್ತು. ಮುಖ್ಯಮಂತ್ರಿ ಮಾಡುತ್ತೇನೆ ಬನ್ನಿ ಎಂದು ಕರೆದಿದ್ದರು. ಆದರೆ, ನಾನು ಹೋಗಲಿಲ್ಲ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.</p>.<p>ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಜುಗೂಳ ಗ್ರಾಮದ ನೆರೆ ಸಂತ್ರಸ್ತರ ಅಹವಾಲು ಸ್ವೀಕರಿಸಲು ಬಂದಿದ್ದಾಗ ಅವರು ಸುದ್ದಿಗಾರರ ಜೊತೆ ಮಾತನಾಡಿದರು.</p>.<p>‘ನಾನು ಯಾರ ಹಂಗಿನಲ್ಲಿಲ್ಲ. ಇಂಥವರಿಗೆ ಬೆಂಬಲ ಕೊಡುತ್ತೇನೆಂದು ಯಾರಿಗೂ ಬರೆದು ಕೊಟ್ಟಿಲ್ಲ’ ಎಂದು ಹೇಳುವ ಮೂಲಕ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದರು.</p>.<p>‘ನಾನ್ಯಾಕೆ ಹೇಳುತ್ತಿದ್ದೇನೆಂದರೆ, ನನಗೆ ರಾಜಕೀಯ ಮುಖ್ಯವಲ್ಲ. ಜನರು ಮುಖ್ಯ. ಅವರ ಸಮಸ್ಯೆಗಳು ಬಗೆಹರಿಯಬೇಕು. ಸರ್ಕಾರ ಕೆಡವಿ, ಮತ್ತೊಮ್ಮೆ ಸರ್ಕಾರ ಬರುವವರೆಗೆ ಇಲ್ಲಿನ ಜನರು ಬೀದಿಯಲ್ಲಿಯೇ ಬಿದ್ದಿರಬೇಕಾ?’ ಎಂದು ಪ್ರಶ್ನಿಸಿದರು.</p>.<p>‘ಉಪ ಚುನಾವಣೆ ನಡೆದ ತಕ್ಷಣ ಈಗಿನ ಸರ್ಕಾರ ಬಿದ್ದುಹೋಗುತ್ತದೆ. ಪುನಃ ಚುನಾವಣೆ ನಡೆಯಲಿದೆ ಎಂದು ಮೇಲಿಂದ ಮೇಲೆ ಹೇಳುತ್ತಿದ್ದೀರಿ ಏಕಿಷ್ಟು ಅರ್ಜೆಂಟು?’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ತಿವಿದ ಅವರು, ‘ಹೊಸ ಸರ್ಕಾರ ಬರಬೇಕಾದರೆ ಇನ್ನೂ 5– 6 ತಿಂಗಳು ಬೇಕು. ಅಲ್ಲಿಯವರೆಗೆ ಇನ್ನೂ ಎಷ್ಟು ಜನ ರೈತರು ಸಾಯಬೇಕು? ಎಂದು ಹರಿಹಾಯ್ದರು.</p>.<p>‘ರಾಜ್ಯದಲ್ಲಿ ಯಾವ ಪಕ್ಷದ ಆಡಳಿತ ಇರುತ್ತದೆಯೋ, ಯಾರು ಮುಖ್ಯಮಂತ್ರಿ ಯಾಗಿರುತ್ತಾರೋ ಎಂಬುದು ಮುಖ್ಯವಲ್ಲ. ರಾಜ್ಯದ ಜನರ ಸಮಸ್ಯೆ ಬಗೆಹರಿಯುವುದು ಮುಖ್ಯ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>