'ಮಾಧ್ಯಮ ಸ್ನೇಹಿತರು ಏನೇನೋ ಸೃಷ್ಟಿ ಮಾಡಿದ್ದೀರಿ. ನಮ್ಮಲ್ಲಿ ಯಾವುದೇ ರೀತಿಯ ಸ್ಪರ್ಧೆ, ಭಿನ್ನಾಭಿಪ್ರಾಯ ಇರಲಿಲ್ಲ. ಪಾಪ, ನಿಮಗೆ ಯಾರೋ ಮಾಹಿತಿ ನೀಡಿದ್ದಾರೆ ಎಂದು ನೀವು ಸುದ್ದಿ ಮಾಡಿದ್ದೀರಿ. ಈ ಊಹಾಪೋಹಗಳಿಗೆ ಸೂಕ್ತ ಕಾಲದಲ್ಲಿ ತೆರೆ ಎಳೆಯಬೇಕು ಎಂಬುದು ನಮ್ಮ ಅಭಿಪ್ರಾಯ. ಹೀಗಾಗಿಯೇ ಇವತ್ತು ಈ ಬಗ್ಗೆ ಎಂ.ಬಿ. ಪಾಟೀಲರ ಜೊತೆಯಾಗಿ ಮಾತನಾಡುತ್ತಿದ್ದೇನೆ' ಎಂದರು.