<p><strong>ಬೆಂಗಳೂರು: </strong>ದೇಹದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗಿದ್ದರಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧರಿಗೆ ಒಂದು ವಾರ ಚಿಕಿತ್ಸೆ ನೀಡಿದ ವೈದ್ಯರು, ₹2ಲಕ್ಷ ಬಿಲ್ ಕೊಟ್ಟಿದ್ದಾರೆ. ಕೊನೆಗೆ, ಕೊರೊನಾ ಪಾಸಿಟಿವ್ ಇದೆ ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಎಂದು ಕೈತೊಳೆದುಕೊಂಡಿದ್ದಾರೆ. ಬೇರೆಕಡೆ ಪರೀಕ್ಷೆಗೆ ಒಳಪಟ್ಟಾಗ ಕೊರೊನಾ ನೆಗೆಟಿವ್ ವರದಿ ಬಂದಿದೆ !</p>.<p>‘ನಮ್ಮ ತಂದೆ ಕಾಂತರಾಜು (70) ಅವರನ್ನು ನಾಗರಭಾವಿ ಮುಖ್ಯರಸ್ತೆಯ ವಿನಾಯಕ ಲೇಔಟ್ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕಳೆದ ಭಾನುವಾರ ದಾಖಲಿಸಿದ್ದೆವು. ಉಸಿರಾಟದ ತೊಂದರೆ ಇದೆ ಎಂದು ಹೇಳಿ ಚಿಕಿತ್ಸೆ ಆರಂಭಿಸಿದರು. ನಮಗೆ ಒಳಗೆ ಬಿಡಲೇ ಇಲ್ಲ’ ಎಂದು ಪುತ್ರ ಲೋಕೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಕೊರೊನಾ ಪರೀಕ್ಷೆ ಮಾಡಬೇಕು ಎಂದು ₹5 ಸಾವಿರ ಕಟ್ಟಿಸಿಕೊಂಡರು. ನಂತರ, ನಿಮ್ಮ ತಂದೆಗೆ ಪಾಸಿಟಿವ್ ಇದೆ. ಕೋವಿಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದರು. ಈ ವೇಳೆಗಾಗಲೇ ₹2 ಲಕ್ಷ ಬಿಲ್ ಆಗಿತ್ತು.ಬಿಬಿಎಂಪಿ ಅಧಿಕಾರಿಗಳು ನಮ್ಮ ಮನೆಯನ್ನೂ ಸೀಲ್ಡೌನ್ ಮಾಡಿದ್ದರು’ ಎಂದು ಅವರು ಹೇಳಿದರು.</p>.<p>‘ರಾಜರಾಜೇಶ್ವರಿ ನಗರದಲ್ಲಿರುವ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಿಸಿದ್ದೆವು. ಪರೀಕ್ಷೆ ನಡೆಸಿದ ವೈದ್ಯರು, ನಿಮ್ಮ ತಂದೆಗೆ ಇಲ್ಲ. ಮನೆಗೆ ಕರೆದುಕೊಂಡು ಹೋಗಿ ಎಂದರು. ಈಗಲೂ ಅವರಿಗೆ ಜ್ವರ ಅಥವಾ ಉಸಿರಾಟದ ಸಮಸ್ಯೆ ಇಲ್ಲ’ ಎಂದು ಲೋಕೇಶ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ದೇಹದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗಿದ್ದರಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧರಿಗೆ ಒಂದು ವಾರ ಚಿಕಿತ್ಸೆ ನೀಡಿದ ವೈದ್ಯರು, ₹2ಲಕ್ಷ ಬಿಲ್ ಕೊಟ್ಟಿದ್ದಾರೆ. ಕೊನೆಗೆ, ಕೊರೊನಾ ಪಾಸಿಟಿವ್ ಇದೆ ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಎಂದು ಕೈತೊಳೆದುಕೊಂಡಿದ್ದಾರೆ. ಬೇರೆಕಡೆ ಪರೀಕ್ಷೆಗೆ ಒಳಪಟ್ಟಾಗ ಕೊರೊನಾ ನೆಗೆಟಿವ್ ವರದಿ ಬಂದಿದೆ !</p>.<p>‘ನಮ್ಮ ತಂದೆ ಕಾಂತರಾಜು (70) ಅವರನ್ನು ನಾಗರಭಾವಿ ಮುಖ್ಯರಸ್ತೆಯ ವಿನಾಯಕ ಲೇಔಟ್ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕಳೆದ ಭಾನುವಾರ ದಾಖಲಿಸಿದ್ದೆವು. ಉಸಿರಾಟದ ತೊಂದರೆ ಇದೆ ಎಂದು ಹೇಳಿ ಚಿಕಿತ್ಸೆ ಆರಂಭಿಸಿದರು. ನಮಗೆ ಒಳಗೆ ಬಿಡಲೇ ಇಲ್ಲ’ ಎಂದು ಪುತ್ರ ಲೋಕೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಕೊರೊನಾ ಪರೀಕ್ಷೆ ಮಾಡಬೇಕು ಎಂದು ₹5 ಸಾವಿರ ಕಟ್ಟಿಸಿಕೊಂಡರು. ನಂತರ, ನಿಮ್ಮ ತಂದೆಗೆ ಪಾಸಿಟಿವ್ ಇದೆ. ಕೋವಿಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದರು. ಈ ವೇಳೆಗಾಗಲೇ ₹2 ಲಕ್ಷ ಬಿಲ್ ಆಗಿತ್ತು.ಬಿಬಿಎಂಪಿ ಅಧಿಕಾರಿಗಳು ನಮ್ಮ ಮನೆಯನ್ನೂ ಸೀಲ್ಡೌನ್ ಮಾಡಿದ್ದರು’ ಎಂದು ಅವರು ಹೇಳಿದರು.</p>.<p>‘ರಾಜರಾಜೇಶ್ವರಿ ನಗರದಲ್ಲಿರುವ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಿಸಿದ್ದೆವು. ಪರೀಕ್ಷೆ ನಡೆಸಿದ ವೈದ್ಯರು, ನಿಮ್ಮ ತಂದೆಗೆ ಇಲ್ಲ. ಮನೆಗೆ ಕರೆದುಕೊಂಡು ಹೋಗಿ ಎಂದರು. ಈಗಲೂ ಅವರಿಗೆ ಜ್ವರ ಅಥವಾ ಉಸಿರಾಟದ ಸಮಸ್ಯೆ ಇಲ್ಲ’ ಎಂದು ಲೋಕೇಶ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>