ಕಲಬುರ್ಗಿಯಲ್ಲಿ 105, ಉಡುಪಿಯಲ್ಲಿ 62, ರಾಯಚೂರಿನಲ್ಲಿ 35, ಬೆಂಗಳೂರಿನಲ್ಲಿ 21, ಮಂಡ್ಯದಲ್ಲಿ 13, ಯಾದಗಿರಿಯಲ್ಲಿ 9, ವಿಜಯಪುರದಲ್ಲಿ 6, ದಾವಣಗೆರೆಯಲ್ಲಿ 3, ದಕ್ಷಿಣ ಕನ್ನಡದಲ್ಲಿ 2, ಮೈಸೂರಿನಲ್ಲಿ 2, ಬಾಗಲಕೋಟೆಯಲ್ಲಿ 2, ಶಿವಮೊಗ್ಗದಲ್ಲಿ 2, ಕೋಲಾರದಲ್ಲಿ 2 ಹಾಗೂ ಹಾಸನ, ಬಳ್ಳಾರಿ, ಧಾರವಾಡ, ಬೆಂಗಳೂರು ಗ್ರಾಮಾಂತರದಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ. ಬುಧವಾರ ಒಂದೇ ದಿನ 15,197 ಮಂದಿಯ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆ ಮಾಡಲಾಗಿದೆ. 111 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.