ಬೆಂಗಳೂರು: ವಿಧಾನ ಪರಿಷತ್ನಲ್ಲಿ ತೆರವಾಗಿರುವ ಒಂದು ಸ್ಥಾನಕ್ಕೆ ಫೆ.17ರಂದು ಉಪಚುನಾವಣೆ ನಡೆಯಲಿದ್ದು, ಬಿಜೆಪಿಯಿಂದ ಯಾರಿಗೆ ಮಣೆ ಹಾಕಬಹುದು ಎಂಬ ಕುತೂಹಲ ಹೆಚ್ಚಾಗಿದೆ.
ಶಿವಾಜಿನಗರ ಕ್ಷೇತ್ರದಿಂದ ವಿಧಾನಸಭೆಗೆ ರಿಜ್ವಾನ್ ಅರ್ಷದ್ ಆಯ್ಕೆಯಾದ ಕಾರಣ ಈ ಸ್ಥಾನ ತೆರವಾಗಿದೆ.2022ರ ಜೂನ್ 14ರ ವರೆಗೆ ಸದಸ್ಯತ್ವದ ಅವಧಿ ಇರಲಿದೆ. ಬಿಜೆಪಿಯಿಂದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಅವಕಾಶ ನೀಡುವ ಸಾಧ್ಯತೆ ಇದ್ದರೂ, ಈ ಹಿಂದಿನ ಅವಧಿಯಲ್ಲಿ ಶಾಸಕರಾಗಿದ್ದು ಬಳಿಕ ಅನರ್ಹರಾದ ಆರ್.ಶಂಕರ್ ಅವರನ್ನೂ ಪರಿಗಣಿಸಬಹುದು ಎಂದು ಹೇಳಲಾಗುತ್ತಿದೆ.
ಚುನಾವಣೆವೇಳಾಪಟ್ಟಿ: ಜನವರಿ 30ರಂದು ಅಧಿಸೂಚನೆ ಹೊರಡಿಸಲಿದ್ದು, ಫೆ.6ರೊಳಗೆ ನಾಮಪತ್ರ ಸಲ್ಲಿಸಬೇಕು. 7ರಂದು ಪರಿಶೀಲನೆ ನಡೆಯಲಿದೆ. 10ರೊಳಗೆ ನಾಮಪತ್ರ ಹಿಂದೆಗೆದುಕೊಳ್ಳಬಹುದು. 17ರಂದು ಮತದಾನ ನಡೆಯಲಿದ್ದು, 5 ಗಂಟೆಯ ಬಳಿಕ ಎಣಿಕೆ ನಡೆಯಲಿದೆ