ಅಭಯ್ ಸಿಂಗ್ ಗಾಯಕವಾಡ, ಆಶುತೋಷ್ ತಿಲಾರಿ ಹಾಗೂ ಅಕ್ಷಯ ದೇಸಾಯಿ ಬಂಧಿತರು. ಮಹಾರಾಷ್ಟ್ರದ ಕೊಲ್ಹಾಪುರದವರಾದ ಅವರು ಸದ್ಯ ಇಲ್ಲಿನ ಶಹಾಪುರದಲ್ಲಿ ಇದ್ದರು. ಮಹಾರಾಷ್ಟ್ರಕ್ಕೆ ಹೋಗುವಾಗ, ಅವರ ಕಾರನ್ನು ಪೊಲೀಸರು ತಡೆದು ಪರಿಶೀಲನೆ ನಡೆಸಿದ್ದಾರೆ. ಅಥಣಿ ಸಿಪಿಐ ಶಂಕರಗೌಡ ಬಸಗೌಡರ ಹಾಗೂ ಕಾಗವಾಡ ಪಿಎಸ್ಐ ಹಣಮಂತ ಧರ್ಮಟ್ಟ ನೇತೃತ್ವದಲ್ಲಿ ದಾಳಿ ನಡೆದಿದೆ.