ಇದನ್ನೂ ಓದಿ...ಮೋದಿ ನಂಬಿಕೆ ದ್ರೋಹಿ: ದೇವನೂರ
ಸಂವಿಧಾನದ ಶೀಲ ಎಂದರೆ ಜಾತ್ಯಾತೀತ ಮೌಲ್ಯ. ಜಾಗತಿಕವಾಗಿ ಭಾರತದ ಗೌರವವನ್ನು ಹೆಚ್ಚಿಸಿದ ಮೌಲ್ಯ ಇದು. ಈ ಕಾಯ್ದೆ ಈ ಶೀಲವನ್ನು ಕೆಡಿಸುತ್ತಿದೆ ಎಂದು ಹೇಳಿದರು.
ಸಿಎಎ ಎಂದರೆ ಕಾ. 'ಕಾ ಕಾ' ಎನ್ನುವ ಕಾಗೆ ಶಬ್ದ ಅಪಶಕುನ, ಕೇಡು. 'ಸಿಎಎ' ಅಪಶಕುನವೂ ಹೌದು, ಕೇಡೂ ಹೌದು. ಇದು ಕಾಗೆಯ ಕೂಗಿನಂತೆ ದೇಶದ ಜನರ ಸುಪ್ತ ಮನಸ್ಸಿಗೆ ತಟ್ಟಿದೆ ಎಂದು ವ್ಯಂಗ್ಯವಾಡಿದರು.
ಎನ್ ಆರ್ ಸಿಯನ್ನು ಅಮಿತ್ ಷಾ ದೇಶಾದ್ಯಂತ ಜಾರಿಗೆ ತರುತ್ತೇವೆ ಎಂದರೆ, ಪ್ರಧಾನಿ ಮೋದಿ ಇಲ್ಲ ಅಂತಾರೆ. ಯಾರನ್ನು ನಂಬುವುದು ಎಂದು ಪ್ರಶ್ನಿಸಿದ ಅವರು ಇವರಿಬ್ಬರೂ ಜನಜೀವನದ ಪ್ರಾಣದ ಜತೆ ಬೆಕ್ಕಿನಂತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮೂಲನಿವಾಸಿಗಳನ್ನು ಎನ್ ಆರ್ ಸಿಯ ಮೂಲಕ ಅರಣ್ಯದಿಂದ ಸಂಪೂರ್ಣವಾಗಿ ಎತ್ತಂಗಡಿ ಮಾಡುವ ಸಂಚೂ ಇರಬಹುದು. ಆಗ ಕಾರ್ಪೊರೇಟ್ ಕಂಪನಿಗಳು ಅರಣ್ಯನಾಶ ಹಾಗೂ ಗಣಿಗಾರಿಕೆ ಮಾಡುವ ಮೂಲಕ ಹಬ್ಬ ಆಚರಿಸುತ್ತವೆ ಎಂದು ಸಂದೇಹ ವ್ಯಕ್ತಪಡಿಸಿದರು.
ಹಿಂದೆ ದೇಶವನ್ನು ಒಂದು ಕಂಪನಿಯಿಂದ ಬಿಡಿಸಿಕೊಂಡು ಬಂದು ಈಗ ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಿದಂತಾಗಿದೆ ಎಂದು ಟೀಕಿಸಿದರು.