<p><strong>ಮೈಸೂರು:</strong> ನಾಲ್ಕು ವರ್ಷಗಳ ಹಿಂದೆ ಪುಂಡಾನೆಯಾಗಿ ಮೆರೆದು ರೈತರ ಆಕ್ರೋಶಕ್ಕೆ ಗುರಿಯಾಗಿದ್ದ ಧನಂಜಯ ಆನೆಗೆ ಈಗ ಜನರಿಂದಲೇ ಅದ್ದೂರಿ ಸ್ವಾಗತ ದೊರೆತಿದೆ.</p>.<p>ಇದೇ ಮೊದಲ ಬಾರಿ ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿರುವ ಈ ಆನೆಯತ್ತ ಎಲ್ಲರ ಚಿತ್ತ ಹರಿದಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ವೀರನಹೊಸಹಳ್ಳಿಯಿಂದ ಭಾನುವಾರ ಮೈಸೂರಿನತ್ತ ಹೊರಟ ಈ ಸಲಗವನ್ನು ಕಾಡಂಚಿನ ಜನರು ಪ್ರೀತಿಯಿಂದ ಬೀಳ್ಕೊಟ್ಟರು.</p>.<p>ಭವಿಷ್ಯದಲ್ಲಿ ಚಿನ್ನದ ಅಂಬಾರಿ ಹೊರಿಸಲು ತಾಲೀಮು ನೀಡುವ ದೃಷ್ಟಿಯಿಂದ ದುಬಾರೆ ಶಿಬಿರದ 35 ವರ್ಷದ ಈ ಆನೆಯನ್ನು ಆಯ್ಕೆ ಮಾಡಲಾಗಿದೆ.</p>.<p>ಧನಂಜಯ ಬಹುದೊಡ್ಡ ಪುಂಡಾನೆ. ಸಕಲೇಶಪುರದ ಬಳಿ ಕಾರ್ಮಿಕರೊಬ್ಬರ ಮೇಲೆ ಎರಗಿ ಕೊಂದು ಹಾಕಿತ್ತು. 2013–14ರಲ್ಲಿ ಹಾಸನ ಜಿಲ್ಲೆಯ ಯಸಳೂರು ಅರಣ್ಯ ವಲಯ ವ್ಯಾಪ್ತಿಯಲ್ಲಿ ಸಲಗಗಳ ಉಪಟಳ ಜೋರಾಗಿತ್ತು. ತೋಟ, ಹೊಲಗದ್ದೆಗಳಿಗೆ ನುಗ್ಗಿ ಫಸಲು ನಾಶ ಮಾಡುತ್ತಿದ್ದವು. ಹಲವಾರು ಮಂದಿ ಈ ಆನೆಗಳಿಗೆ ಬಲಿಯಾಗಿದ್ದರು.</p>.<p>ಹೀಗಾಗಿ, ಪುಂಡಾನೆಗಳನ್ನು ಸೆರೆ ಹಿಡಿಯಲು ಸರ್ಕಾರ ಆದೇಶ ನೀಡಿತ್ತು. ಆಗ ಅರಣ್ಯ ಇಲಾಖೆಯು ಹಲವು ಆನೆಗಳನ್ನು ಖೆಡ್ಡಾಕ್ಕೆ ಕೆಡವಿತ್ತು. ಆ ಕಾರ್ಯಾಚರಣೆಯಲ್ಲಿ ಸೆರೆ ಸಿಕ್ಕ ಆನೆಯೇ ಧನಂಜಯ.</p>.<p><a href="https://www.prajavani.net/stories/stateregional/mysore-dasara-570373.html" target="_blank"><strong><span style="color:#B22222;">ಇದನ್ನೂ ಓದಿ:</span>ದಸರಾ: ಕಾಡಿನಿಂದ ನಾಡಿಗೆ ಗಜಪಯಣ</strong></a></p>.<p>‘ಅದೊಂದು ಸವಾಲಿನ ಕಾರ್ಯಾಚರಣೆ. ಅದರಲ್ಲೂ ಧನಂಜಯನನ್ನು ಸೆರೆ ಹಿಡಿದಾಗ ರೈತರು, ಕಾರ್ಮಿಕರು ನಿಟ್ಟುಸಿರುಬಿಟ್ಟಿದ್ದರು. ಈ ಆನೆಯನ್ನು ಕ್ರಾಲ್ಗೆ (ಆನೆ ಪಳಗಿಸುವ ದೊಡ್ಡಿ) ಹಾಕಿ ಕೊಡಗಿನ ದುಬಾರೆ ಶಿಬಿರದಲ್ಲಿ ಪಳಗಿಸಿದೆವು. ಧನಂಜಯ ಎಂದು ಹೆಸರಿಟ್ಟೆವು. ಈಗ ಸಂಪೂರ್ಣ ಬದಲಾಗಿದೆ’ ಎಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪಶುವೈದ್ಯ ಡಿ.ಎನ್.ನಾಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಜೆ.ಸಿ.ಭಾಸ್ಕರ್ (ಮಾವುತ) ಹಾಗೂ ಜೆ.ಬಿ.ಸೂನ್ಯ (ಕಾವಾಡಿ) ಈ ಆನೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಜನರ ಪ್ರೀತಿಗೆ ಪಾತ್ರರಾಗಿರುವುದು ಮಾತ್ರವಲ್ಲ; ಕಾಡಾನೆಗಳ ಕಾರ್ಯಾಚರಣೆಗೂ ಇದು ಎತ್ತಿದ ಕೈ. 4,050 ಕೆ.ಜಿ ತೂಕದ ಈ ಆನೆಯು<br />ಬಲಿಷ್ಠವಾಗಿದ್ದು, ಐದಾರು ಪುಂಡಾನೆಗಳನ್ನು ಸೆರೆ ಹಿಡಿದಿದೆ.</p>.<p>‘ಈಗ ಸಂಪೂರ್ಣವಾಗಿ ಶಾಂತವಾಗಿದೆ. ಮಗುವಿನಂತೆ ನೋಡಿಕೊಳ್ಳುತ್ತಿದ್ದೇನೆ. ಅದು ಕೂಡ ತುಂಬಾ ಆತ್ಮೀಯತೆ ಬೆಳೆಸಿಕೊಂಡಿದೆ. ಹೇಳಿದ ಮಾತು ಕೇಳುತ್ತದೆ’ ಎಂದು ಹೇಳುತ್ತಾರೆ ಮಾವುತ ಜೆ.ಸಿ.ಭಾಸ್ಕರ್.</p>.<p>**</p>.<p>ಮುಂಗೋಪಿ ಧನಂಜಯ ಆನೆ ಪಳಗಿದ ರೀತಿಯೇ ಅಚ್ಚರಿ. 4 ವರ್ಷಗಳಲ್ಲಿ ಮೃದು ಸ್ವಭಾವಿಯಾಗಿದೆ. 10 ವರ್ಷಗಳಲ್ಲಿ ಅಂಬಾರಿ ಹೊರಲು ಸಜ್ಜುಗೊಳಿಸಬಹುದು.</p>.<p><em><strong>-ಡಾ.ಡಿ.ಎನ್.ನಾಗರಾಜು, ಪಶುವೈದ್ಯ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ನಾಲ್ಕು ವರ್ಷಗಳ ಹಿಂದೆ ಪುಂಡಾನೆಯಾಗಿ ಮೆರೆದು ರೈತರ ಆಕ್ರೋಶಕ್ಕೆ ಗುರಿಯಾಗಿದ್ದ ಧನಂಜಯ ಆನೆಗೆ ಈಗ ಜನರಿಂದಲೇ ಅದ್ದೂರಿ ಸ್ವಾಗತ ದೊರೆತಿದೆ.</p>.<p>ಇದೇ ಮೊದಲ ಬಾರಿ ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿರುವ ಈ ಆನೆಯತ್ತ ಎಲ್ಲರ ಚಿತ್ತ ಹರಿದಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ವೀರನಹೊಸಹಳ್ಳಿಯಿಂದ ಭಾನುವಾರ ಮೈಸೂರಿನತ್ತ ಹೊರಟ ಈ ಸಲಗವನ್ನು ಕಾಡಂಚಿನ ಜನರು ಪ್ರೀತಿಯಿಂದ ಬೀಳ್ಕೊಟ್ಟರು.</p>.<p>ಭವಿಷ್ಯದಲ್ಲಿ ಚಿನ್ನದ ಅಂಬಾರಿ ಹೊರಿಸಲು ತಾಲೀಮು ನೀಡುವ ದೃಷ್ಟಿಯಿಂದ ದುಬಾರೆ ಶಿಬಿರದ 35 ವರ್ಷದ ಈ ಆನೆಯನ್ನು ಆಯ್ಕೆ ಮಾಡಲಾಗಿದೆ.</p>.<p>ಧನಂಜಯ ಬಹುದೊಡ್ಡ ಪುಂಡಾನೆ. ಸಕಲೇಶಪುರದ ಬಳಿ ಕಾರ್ಮಿಕರೊಬ್ಬರ ಮೇಲೆ ಎರಗಿ ಕೊಂದು ಹಾಕಿತ್ತು. 2013–14ರಲ್ಲಿ ಹಾಸನ ಜಿಲ್ಲೆಯ ಯಸಳೂರು ಅರಣ್ಯ ವಲಯ ವ್ಯಾಪ್ತಿಯಲ್ಲಿ ಸಲಗಗಳ ಉಪಟಳ ಜೋರಾಗಿತ್ತು. ತೋಟ, ಹೊಲಗದ್ದೆಗಳಿಗೆ ನುಗ್ಗಿ ಫಸಲು ನಾಶ ಮಾಡುತ್ತಿದ್ದವು. ಹಲವಾರು ಮಂದಿ ಈ ಆನೆಗಳಿಗೆ ಬಲಿಯಾಗಿದ್ದರು.</p>.<p>ಹೀಗಾಗಿ, ಪುಂಡಾನೆಗಳನ್ನು ಸೆರೆ ಹಿಡಿಯಲು ಸರ್ಕಾರ ಆದೇಶ ನೀಡಿತ್ತು. ಆಗ ಅರಣ್ಯ ಇಲಾಖೆಯು ಹಲವು ಆನೆಗಳನ್ನು ಖೆಡ್ಡಾಕ್ಕೆ ಕೆಡವಿತ್ತು. ಆ ಕಾರ್ಯಾಚರಣೆಯಲ್ಲಿ ಸೆರೆ ಸಿಕ್ಕ ಆನೆಯೇ ಧನಂಜಯ.</p>.<p><a href="https://www.prajavani.net/stories/stateregional/mysore-dasara-570373.html" target="_blank"><strong><span style="color:#B22222;">ಇದನ್ನೂ ಓದಿ:</span>ದಸರಾ: ಕಾಡಿನಿಂದ ನಾಡಿಗೆ ಗಜಪಯಣ</strong></a></p>.<p>‘ಅದೊಂದು ಸವಾಲಿನ ಕಾರ್ಯಾಚರಣೆ. ಅದರಲ್ಲೂ ಧನಂಜಯನನ್ನು ಸೆರೆ ಹಿಡಿದಾಗ ರೈತರು, ಕಾರ್ಮಿಕರು ನಿಟ್ಟುಸಿರುಬಿಟ್ಟಿದ್ದರು. ಈ ಆನೆಯನ್ನು ಕ್ರಾಲ್ಗೆ (ಆನೆ ಪಳಗಿಸುವ ದೊಡ್ಡಿ) ಹಾಕಿ ಕೊಡಗಿನ ದುಬಾರೆ ಶಿಬಿರದಲ್ಲಿ ಪಳಗಿಸಿದೆವು. ಧನಂಜಯ ಎಂದು ಹೆಸರಿಟ್ಟೆವು. ಈಗ ಸಂಪೂರ್ಣ ಬದಲಾಗಿದೆ’ ಎಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪಶುವೈದ್ಯ ಡಿ.ಎನ್.ನಾಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಜೆ.ಸಿ.ಭಾಸ್ಕರ್ (ಮಾವುತ) ಹಾಗೂ ಜೆ.ಬಿ.ಸೂನ್ಯ (ಕಾವಾಡಿ) ಈ ಆನೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಜನರ ಪ್ರೀತಿಗೆ ಪಾತ್ರರಾಗಿರುವುದು ಮಾತ್ರವಲ್ಲ; ಕಾಡಾನೆಗಳ ಕಾರ್ಯಾಚರಣೆಗೂ ಇದು ಎತ್ತಿದ ಕೈ. 4,050 ಕೆ.ಜಿ ತೂಕದ ಈ ಆನೆಯು<br />ಬಲಿಷ್ಠವಾಗಿದ್ದು, ಐದಾರು ಪುಂಡಾನೆಗಳನ್ನು ಸೆರೆ ಹಿಡಿದಿದೆ.</p>.<p>‘ಈಗ ಸಂಪೂರ್ಣವಾಗಿ ಶಾಂತವಾಗಿದೆ. ಮಗುವಿನಂತೆ ನೋಡಿಕೊಳ್ಳುತ್ತಿದ್ದೇನೆ. ಅದು ಕೂಡ ತುಂಬಾ ಆತ್ಮೀಯತೆ ಬೆಳೆಸಿಕೊಂಡಿದೆ. ಹೇಳಿದ ಮಾತು ಕೇಳುತ್ತದೆ’ ಎಂದು ಹೇಳುತ್ತಾರೆ ಮಾವುತ ಜೆ.ಸಿ.ಭಾಸ್ಕರ್.</p>.<p>**</p>.<p>ಮುಂಗೋಪಿ ಧನಂಜಯ ಆನೆ ಪಳಗಿದ ರೀತಿಯೇ ಅಚ್ಚರಿ. 4 ವರ್ಷಗಳಲ್ಲಿ ಮೃದು ಸ್ವಭಾವಿಯಾಗಿದೆ. 10 ವರ್ಷಗಳಲ್ಲಿ ಅಂಬಾರಿ ಹೊರಲು ಸಜ್ಜುಗೊಳಿಸಬಹುದು.</p>.<p><em><strong>-ಡಾ.ಡಿ.ಎನ್.ನಾಗರಾಜು, ಪಶುವೈದ್ಯ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>