ಅಮಾಯಕರ ಬಂಧನ: ಹತ್ಯೆ ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಲಾಗಿದೆಯೆಂದು ಹೇಳಿದ್ದ ಸಿಬಿಐ, ನೈಜ ಆರೋಪಿಗಳು ಎನ್ನಲಾದ 8 ಮಂದಿಯನ್ನು ಈಗಾಗಲೇ ಬಂಧಿಸಿದೆ. ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಿದ್ದು ಏಕೆ? ಯಾರಾದರೂ ಒತ್ತಡ ಹಾಕಿದರಾ? ಹತ್ಯೆ ಹಿಂದೆ ರಾಜಕಾರಣಿಗಳ ಕೈವಾಡ ಇದೆಯಾ? ಎಂಬ ಹಲವು ಪ್ರಶ್ನೆಗಳಿಗೆ ಸಿಬಿಐ ಉತ್ತರ ಪಡೆಯುತ್ತಿದೆ.