ಕೀಲಿಮಣೆ ಮತ್ತು ಅಕ್ಷರ ಹೇಗಿರಬೇಕು ಎಂಬ ಚರ್ಚೆಯೇ ಇನ್ನೂ ಮುಗಿದಿಲ್ಲ. ಮುಖ್ಯವಾಗಿ ಕನ್ನಡ ಸಾಹಿತ್ಯ, ಶಾಸನಗಳು, ಹಸ್ತಪ್ರತಿಗಳನ್ನು ನಾವು ಇಂದಿನ ಮತ್ತು ಮುಂದಿನ ಪೀಳಿಗೆಗೆ ಹೇಗೆ ತಲುಪಿಸಬೇಕು ? ಕಂಪ್ಯೂಟರ್, ಇಂಟರ್ನೆಟ್,ಮೊಬೈಲ್ ಇತ್ಯಾದಿಗಳ ಅಪ್ಲಿಕೇಷನ್ಗಳಲ್ಲಿ ಕನ್ನಡ ಬಳಕೆ ಹೇಗೆ ಮಾಡಬೇಕು ಎಂಬ ಚರ್ಚೆಗಳು ನಡೆಯುತ್ತಿಲ್ಲ ಎನ್ನುತ್ತಾರೆ ಹಿರಿಯ ತಂತ್ರಜ್ಞ ಉದಯಶಂಕರ ಪುರಾಣಿಕ.