ಸ್ಥಳಾಂತರಿಸಿರುವ ಕಾಲೇಜನ್ನು ಕನಕಪುರಕ್ಕೆ ವಾಪಸ್ ಕೊಡಬೇಕು ಎಂದು ಶಿವಕುಮಾರ್ ಪಟ್ಟುಹಿಡಿದಿದ್ದರೆ, ಜಿಲ್ಲಾ ಕೇಂದ್ರಗಳಿಗೆ ಮಾತ್ರ ವೈದ್ಯಕೀಯ ಕಾಲೇಜು ನೀಡಲಾಗುವುದು. ತಾಲ್ಲೂಕು ಕೇಂದ್ರಕ್ಕೆ ಕೊಡುವುದಿಲ್ಲ ಎಂದು ಯಡಿಯೂರಪ್ಪ ಪ್ರತಿಪಟ್ಟು ಹಾಕಿದ್ದಾರೆ. ಇಬ್ಬರೂ ತಮ್ಮ ನಿಲುವಿಗೆ ಅಂಟಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇದು ಹೋರಾಟದ ರೂಪ ತಾಳಲಿದೆ ಎಂದು ಹೇಳಲಾಗುತ್ತಿದೆ.