ಶಾಸಕಾಂಗ ಸಭೆಗೆ ಗೈರುಹಾಜರಿಯಾದ ಶಾಸಕರ ಕುರಿತು ಮಾತನಾಡಿದ ಅವರು, 'ಕೆಲವರು ಎರಡು ಮೂರು ಬಾರಿ ಶಾಸಕರಾಗಿದ್ದಾರೆ. ಸಚಿವರೂ ಆಗಿದ್ದಾರೆ, ಅವರಿಗಾಗಿ ಸದನದಲ್ಲಿ ಕುಳಿತುಕೊಳ್ಳುವ ಆಸನ ವ್ಯವಸ್ಥೆ, ಮಾತನಾಡಲು ಮೈಕ್ ವ್ಯವಸ್ಥೆ ಮಾಡಲಾಗಿರುತ್ತದೆ. ಅದರ ಜೊತೆ ಅವರ ಬೇಡಿಕೆಗಳನ್ನು ಕೇಳಲು ಅವಕಾಶವನ್ನು ನೀಡಲಾಗುತ್ತದೆ. ಅದನ್ನು ಬಿಟ್ಟು ಸದನಕ್ಕೆ ಗೈರಾದರೆ ಪ್ರಯೋಜನವೇನು' ಎಂದ ಬೇಸರ ವ್ಯಕ್ತಪಡಿಸಿದರು.