‘ಬರ ನಿರ್ವಹಣೆ ಹಾಗೂ ಪರಿಹಾರ ಕಾಮಗಾರಿ ಕೈಗೊಳ್ಳುವ ದಿಸೆಯಲ್ಲಿ ವಿಪತ್ತು ಉಪಶಮನ ನಿಧಿ (ಎಸ್ಡಿಎಂಎ) ಸ್ಥಾಪನೆ ಆಗಿದೆಯೇ ಅಥವಾ ಇಲ್ಲವೇ, ಸ್ಥಾಪನೆ ಮಾಡಿದ್ದರೆ ಅದರಲ್ಲಿ ಎಷ್ಟು ಹಣ ಇದೆ, ಗೋಶಾಲೆ ಹಾಗೂ ಜಾನುವಾರು ಶಿಬಿರಗಳಲ್ಲಿ ಮೇವು, ಕುಡಿಯುವ ನೀರು ಹಾಗೂ ಪಶು ವೈದ್ಯಕೀಯ ಸೌಲಭ್ಯ ಒದಗಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರ 2015ರ ಏಪ್ರಿಲ್ 8ರಂದು ಹೊರಡಿಸಲಾದ ಮಾರ್ಗಸೂಚಿಗಳ ಪಾಲನೆ ಆಗುತ್ತಿದೆಯೇ’ ಎಂಬ ಬಗ್ಗೆಯೂ ವಿವರ ಸಲ್ಲಿಸುವಂತೆ ತಾಕೀತು ಮಾಡಿದೆ.