ಪಕ್ಕದ ಜಾನಕೊಂಡ ಗ್ರಾಮದಲ್ಲಿ ರಾಜಣ್ಣ ಎಂಬುವರ ತೋಟ ಸಂಪೂರ್ಣ ಒಣಗಿದೆ. ಐದು ಕೊಳವೆಬಾವಿ ಬತ್ತಿವೆ. ಟ್ಯಾಂಕರ್ ನೀರು ಹರಿಸಿ ತೋಟ ಉಳಿಸಿಕೊಳ್ಳುವ ಪ್ರಯತ್ನ ಫಲ ನೀಡಲಿಲ್ಲ. ಅಡಿಕೆ ಜತೆಗೆ ತೆಂಗಿನ ಮರಗಳು ನೆಲಕ್ಕುರುಳುತ್ತಿವೆ. ವಿಶ್ವೇಶ್ವರ ಎಂಬುವರ
ನಾಲ್ಕು ಎಕರೆ ತೋಟದಲ್ಲಿದ್ದ 1,800 ಅಡಿಕೆ ಮರಗಳು ಒಂದೊಂದಾಗಿ ಉರುಳುತ್ತಿವೆ. 20 ವರ್ಷಗಳಿಂದ ಫಲ ನೀಡುತ್ತಿದ್ದ ತೋಟ ಬರಡಾಗಿರುವುದನ್ನು ಕಂಡು ವ್ಯಥೆ ಪಡುತ್ತಿದ್ದಾರೆ.