ವನ್ಯಜೀವಿ ವೈದ್ಯಾಧಿಕಾರಿ ಡಾ.ಮುಜೀಬ್, ಬೆಳಿಗ್ಗೆಯೇ ಚಿಕಿತ್ಸೆ ನೀಡಿದ್ದಾರೆ. ಆದರೆ ಔಷಧೋಪಚಾರ ಮಾಡಿದ ಎಂಟು ಗಂಟೆ ಬಳಿಕವೂ ಆನೆಯು ಚೇತರಿಸಿಕೊಂಡಿಲ್ಲ. ಬಿದ್ದ ಜಾಗದಲ್ಲೇ ನೋವಿನಿಂದ ನರಳಾಡುತ್ತಿದೆ. ಮತ್ತಷ್ಟು ಗ್ಲೂಕೋಸ್, ಚುಚ್ಚುಮದ್ದು ನೀಡಿದರೂ ಪರಿಣಾಮವಾಗಿಲ್ಲ. ಅರಣ್ಯ ಇಲಾಖೆಯ ಸಿಬ್ಬಂದಿಯು ಮರದ ಕಂಬಗಳನ್ನು ಬಳಸಿ ಹಾಗೂ ದುಬಾರೆ ಶಿಬಿರದ ಐದು ಸಾಕಾನೆಗಳ ನೆರವಿನಿಂದ ಅಸ್ವಸ್ಥ ಆನೆಯನ್ನು ಎಬ್ಬಿಸಿ ನಿಲ್ಲಿಸಲು ಪ್ರಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ.