ಮಾರ್ಚ್ 21ರಿಂದ 30ರ ಅವಧಿಯಲ್ಲಿ ರಾಜ್ಯದ 1,777 ಸ್ಥಳಗಳಲ್ಲಿ ಕಾಳ್ಗಿಚ್ಚು ಕಾಣಿಸಿದ್ದರೆ, ಬುಧವಾರ ಒಂದೇ ದಿನ 300 ಸ್ಥಳಗಳಲ್ಲಿ ಕಾಳ್ಗಿಚ್ಚು ಕಾಣಿಸಿದೆ. ಬಹುತೇಕ ನಗರಗಳ ಅಂಚಿನಲ್ಲಿರುವ ಕಾಡುಗಳಲ್ಲೇ ಬೆಂಕಿ ಕಾಣಿಸಿರುವುದು ವಿಶೇಷವಾಗಿದ್ದು, ಕಾಡನ್ನು ಒತ್ತುವರಿ ಮಾಡುವ ಸಂಚು ಇದರ ಹಿಂದೆ ಇರುವುದು ಸ್ಪಷ್ಟ ಎಂದು ಹೇಳಲಾಗುತ್ತಿದೆ.